Select Your Language

Notifications

webdunia
webdunia
webdunia
webdunia

ಹಣ ಲೂಟಿ ಹೊಡೆದ ಅಧಿಕಾರಿಗಳಿಗೆ ಲಕ್ವ ಹೊಡೆಯಲಿ: ಈಶ್ವರಪ್ಪ ಘೋರ ಶಾಪ

ಹಣ ಲೂಟಿ ಹೊಡೆದ ಅಧಿಕಾರಿಗಳಿಗೆ ಲಕ್ವ ಹೊಡೆಯಲಿ: ಈಶ್ವರಪ್ಪ ಘೋರ ಶಾಪ
ಬೆಂಗಳೂರು , ಮಂಗಳವಾರ, 20 ಜೂನ್ 2017 (14:15 IST)
ಮೇವು ಲೂಟಿ ಹಗರಣದಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದ ಅಧಿಕಾರಿಗಳಿಗೆ ಲಕ್ವ ಹೊಡೆಯಲಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಘೋರ ಶಾಪ ಹಾಕಿದ್ದಾರೆ.
 
ಖಾಸಗಿ ಸುದ್ದಿ ಚಾನೆಲ್‌ನಲ್ಲಿ ಮೇವು ಮತ್ತು ಗೋಶಾಲೆ ನಿರ್ಮಾಣದಲ್ಲಿ ತುಮಕೂರು ಜಿಲ್ಲೆಯೊಂದರಲ್ಲಿಯೇ 22 ಕೋಟಿ ರೂಪಾಯಿ ಅವ್ಯವಹಾರವಾಗಿದೆ ಎನ್ನುವ ವರದಿ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ.
 
ಮೇವು ವಿತರಣೆಯಲ್ಲಿ ಲೂಟಿ, ಗೋಶಾಲೆ ನಿರ್ಮಾಣದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಹೊಡೆದಿದ್ದರೂ ಸರಕಾರ ಮೌನವಾಗಿದೆ. ಹಣ ಲೂಟಿ ಹೊಡೆದ ಅಧಿಕಾರಿಗಳು ಹಾಳಾಗಿ ಹೋಗ್ತಾರೆ ಎಂದು ಈಶ್ವರಪ್ಪ ಹಿಡಿ ಶಾಪ ಹಾಕಿದ್ದಾರೆ.
 
ಕಲಾಪ ಆರಂಭವಾಗುತ್ತಿದ್ದಂತೆ ಮೇವು ಹಗರಣದ ಬಗ್ಗೆ ಪ್ರಸ್ತಾಪಿಸಿದ ಶಾಸಕ ಪುಟ್ಟಣ್ಣಯ್ಯ, ಮೇವು ಲೂಟಿಕೋರ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಿಎಸ್‌ಟಿ ಜಾರಿ: ಜೂನ್ 30ರ ಮಧ್ಯ ರಾತ್ರಿ ಸಂಸತ್ ಭವನದಲ್ಲಿ ವಿಶೇಷ ಕಾರ್ಯಕ್ರಮ