Publish Date: Thu, 16 Mar 2017 (13:49 IST)
Updated Date: Thu, 16 Mar 2017 (13:51 IST)
ವಿಧಾನಸಭೆಯ ಕಲಾಪದಲ್ಲಿ ಡೈರಿ ವಿವಾದ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೆ ವಿಧಾನಪರಿಷತ್ನಲ್ಲೂ ಡೈರಿ ಗಲಾಟೆ ಪ್ರತಿಧ್ವನಿಸಿತು.
ನಿಲುವಳಿ ಸೂಚನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ಏರ್ಪಟ್ಟು ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಡೈರಿ ಗದ್ದಲ ಭುಗಿಲೆದ್ದಿತು. ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಡೈರಿ ವಿಷಯದ ಬಗ್ಗೆ ಚರ್ಚಿಸಲು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರಲ್ಲಿ ಕೋರಿದರು.
ಈಶ್ವರಪ್ಪ ಕೋರಿಕೆಯಿಂದ ಕೆಂಡಾಮಂಡಲವಾದ ಕಾಂಗ್ರೆಸ್ ನಾಯಕರು ಸಹಾರಾ ಡೈರಿಯಲ್ಲಿ ಮೋದಿಗೆ ಹಣ ನೀಡಿರುವ ಬಗ್ಗೆ ಪ್ರಸ್ತಾಪಿಸಿ ಎಂದಾಗ ಉಭಯ ಪಕ್ಷಗಳ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಸದನದಲ್ಲಿ ತೀವ್ರ ಕೋಲಾಹಲ, ಗದ್ದಲಕ್ಕೆ ಕಾರಣವಾಯಿತು.
ಸಭಾಪತಿ ಡಿ.ಎಚ್.ಶಂಕರ್ಮೂರ್ತಿ ವಿಪಕ್ಷಗಳ ಮನವಿಗೆ ಮಣಿಯದೆ ಕಳೆದ ಬಾರಿಯೇ ನಿಲುವಳಿ ಸೂಚನೆಗೆ ಅವಕಾಶ ನೀಡಲಾಗಿದೆ. ಈ ಬಾರಿ ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದಾಗ ವಿಪಕ್ಷಗಳು ಆಕ್ರೋಶಗೊಂಡು ಸಭಾತ್ಯಾಗಕ್ಕೆ ಮುಂದಾದವು.
ಪ್ರಧಾನಿ ಮೋದಿ ಅವರ ಹೆಸರು ಕೂಡಾ ಸಹಾರಾ ಡೈರಿಯಲ್ಲಿ ಉಲ್ಲೇಖವಾಗಿದೆ ಎಂದು ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಈಶ್ವರಪ್ಪಗೆ ಲೇವಡಿ ಮಾಡಿದರು. ಯಡಿಯೂರಪ್ಪ ಚೆಕ್ ಪಡೆದು ಭ್ರಷ್ಟಾಚಾರವೆಸಗಿರುವುದನ್ನು ಮರೆತಿದ್ದಾರೆ ಎಂದು ಟೀಕಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.