Webdunia - Bharat's app for daily news and videos

Install App

ರಾಜ್ಯದ ಏಕೈಕ ಆಷಾಢ ರಥೋತ್ಸವ ಈ ಬಾರಿ ನಡೆಯೋದಿಲ್ಲ; ನವದಂಪತಿಗಳಿಗೆ ಫುಲ್ ನಿರಾಸೆ

Webdunia
ಗುರುವಾರ, 19 ಜುಲೈ 2018 (14:24 IST)
ಒಂದು ತಿಂಗಳ ವಿರಹ ವೇದನೆ ಅನುಭವಿಸಿ, ರಥೋತ್ಸವದ ನೆಪದಲ್ಲಿ ಜೊತೆಯಾಗುತ್ತಿದ್ದ ನವದಂಪತಿಗಳಿಗೆ ಬಾರಿಯೂ ನಿರಾಸೆ ಕಾದಿದೆ. ಆಷಾಢ ಮಾಸದಲ್ಲಿ ಇಡೀ ರಾಜ್ಯದಲ್ಲಿ ನಡೆಯುತ್ತಿದ್ದ ಏಕೈಕ ರಥೋತ್ಸವ ಈ ಬಾರಿಯೂ ನಡೆಯೋದಿಲ್ಲ.

ಆಷಾಢ ಮಾಸದಲ್ಲಿ ಇಡೀ ರಾಜ್ಯದಲ್ಲಿ ನಡೆಯುತ್ತಿದ್ದ ಏಕೈಕ ರಥೋತ್ಸವ ಅಂದರೆ ಅದು ಚಾಮರಾಜನಗರದ ಚಾಮರಾಜೇಶ್ವರ ತೇರು. ಆದ್ರೆ ಕಳೆದ ವರ್ಷ ಸ್ಥಗಿತಗೊಂಡ ರಥೋತ್ಸವ ಬಾರಿಯೂ ನಡೆಯದೇ ಇರುವ ಪರಿಸ್ಥಿತಿ ಮುಂದುವರಿದಿದೆ. ಒಂದು ತಿಂಗಳ ವಿರಹ ವೇದನೆ ಅನುಭವಿಸಿ, ರಥೋತ್ಸವದ ನೆಪದಲ್ಲಿ ಜೊತೆಯಾಗುತ್ತಿದ್ದ ನವದಂಪತಿಗಳಿಗೆ ಬಾರಿಯೂ ನಿರಾಸೆ ಕಾದಿದೆ.

ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನ ಆಷಾಢ ರಥೋತ್ಸವಕ್ಕೇ ಫೇಮಸ್. ಸಾಮಾನ್ಯವಾಗಿ ಆಷಾಢ ರಥೋತ್ಸವ ರಾಜ್ಯದ ಬೇರೆಲ್ಲೂ ನಡೆಯದಿರುವುದರಿಂದ, ಆಷಾಢ ಕಾರಣಕ್ಕೆ ಪರಸ್ಪರ ಒಂದು ತಿಂಗಳ ಕಾಲ ದೂರವಿರುವ ನವದಂಪತಿಗಳು, ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಹಣ್ಣುಧವನ ಎಸೆಯುವ ಮೂಲಕ ಮತ್ತೆ ಒಂದಾಗಿ ಖುಷಿ ಅನುಭವಿಸ್ತಿದ್ರು. ಆದ್ರೆ ಕಳೆದ ವರ್ಷ ರಥೋತ್ಸವಕ್ಕೆ ಇನ್ನೂ ಒಂದು ತಿಂಗಳಿರುವಾಗ ಕಿಡಿಗೇಡಿಯೊಬ್ಬ ನಿಂತಿದ್ದ ರಥಕ್ಕೆ ಬೆಂಕಿ ಹಚ್ಚಿದ್ದು, ಇದರೊಂದಿಗೆ ರಥದ ಚಕ್ರಗಳು ಶಿಥಿಲಗೊಂಡಿರುವುದರಿಂದ ರಥೋತ್ಸವ ಅಂದಿನಿಂದ ಸ್ಥಗಿತಗೊಂಡಿತು.

ರಥವನ್ನು ರಿಪೇರಿ ಮಾಡಲು ಒಂದು ಕೋಟಿ ರೂಪಾಯಿ ನೀಡಿದ್ರೂ ಸಹ, ಅದು ಸಕಾಲಕ್ಕೆ ದುರಸ್ಥಿಯಾಗಲೇ ಇಲ್ಲ. ಹೀಗಾಗಿ ಈ ಬಾರಿಯೂ ರಥೋತ್ಸವ ನಡೆಯುತ್ತಿಲ್ಲ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 6 ಪ್ರಾಣಿಗಳು ಸಾವು, ಪ್ರಾಣಿ ಪ್ರಿಯರಲ್ಲಿ ಆತಂಕ

ಮದುವೆಯಾಗುವುದಾಗಿ ಗರ್ಭಿಣಿ ಮಾಡಿ ವಂಚನೆ: ಮಗನ ಪರಾರಿಗೆ ಸಹಾಯ ಮಾಡಿದ ಬಿಜೆಪಿ ಮುಖಂಡ ಅರೆಸ್ಟ್‌

90ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದಲೈ ಲಾಮಾ: 130 ವರ್ಷಗಳ ಕಾಲ ಬದುಕುವ ವಿಶ್ವಾಸ

ಮರಾಠಿ ಮಾತನಾಡಲ್ಲ ಎಂದ ಉದ್ಯಮಿ ಕಚೇರಿ ಮೇಲೆ ಕಲ್ಲೆಸೆದ ಎಂಎನ್‌ಎಸ್ ಕಾರ್ಯಕರ್ತರು

ಅರಣ್ಯ ಇಲಾಖೆಯ‌ಲ್ಲಿ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌, 6000ಹುದ್ದೆಗಳು ಶೀಘ್ರದಲ್ಲೇ ಭರ್ತಿ

ಮುಂದಿನ ಸುದ್ದಿ
Show comments