ಕಾಲಿಗೆ ಗುಂಡೇಟು ಬಿದ್ದರು ಚಾಳಿ ಬಿಡದ ಆಸಾಮಿ

Webdunia
ಗುರುವಾರ, 30 ಮಾರ್ಚ್ 2023 (18:38 IST)
ಆತ ನಟೋರಿಯಸ್ ಸರಗಳ್ಳ.80 ಕ್ಕೂ ಹೆಚ್ಚು ಪ್ರಕರದಲ್ಲಿ ಭಾಗಿಯಾಗಿದ್ದ.2018 ರಲ್ಲೇ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ.ಆದ್ರೆ ಖಾಕಿ ಬುಲೆಟ್ ಈತನ ಕಾಲು ಸೀಳಿತ್ತು.ಇಷ್ಟಾದ್ರು ಆಸಾಮಿ ಚಾಳಿ ಬಿಟ್ಟಿರಲಿಲ್ಲ.ಮತ್ತೆ ಚೈನ್ ಸ್ನಾಚಿಂಗ್ ಮಾಡಿ ಕಂಬಿ ಹಿಂದೆ ಸೇರಿದ್ದಾನೆ.ಆಸಾಮಿ ಹೆಸರು ಅಚ್ಯುತ್ ಘನಿ ಈ ನಟೋರಿಯಸ್  ಅಂತಿಂಥವನಲ್ಲ..ಒಂದು ಕಾಲದಲ್ಲಿ ಈತನ ಅಟ್ಟಹಾಸಕ್ಕೆ ಬೆಂಗಳೂರು ಮಹಿಳೆಯರು ನಡುಗಿಹೋಗಿದ್ರು.ಕಪ್ಪು ಬಣ್ಣದ ಪಲ್ಸರ್ ನಲ್ಲಿ ಬರ್ತಿದ್ದ ಆರೋಪಿ ಮಹಿಳೆಯರ ಸರ ಕಸಿದು ಎಸ್ಕೇಪ್ ಆಗಿದ್ದ.ರಾಜ್ಯಾದ್ಯಂತ ಈತನ ಮೇಲೆ ೮೦ ಕ್ಕೂ ಹೆಚ್ಚು ಪ್ರಕರಣಗಳಿವೆ..2018 ರ ಜೂನ್ ನಲ್ಲಿ ಕೆಂಗೇರಿ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ್ರು.ಇಷ್ಟಾದ್ರು ಬುದ್ಧಿ ಕಲಿಯದ ಖದೀಮ..ಜೈಲಿಂದ ಬಂದು ಸರಗಳ್ಳತನಕ್ಕೆ ಇಳಿದಿದ್ದ.

2018 ರಲ್ಲಿ ಜೈಲು ಸೇರಿದ್ದ ಅಚ್ಯುತ್ ಕೆಲ  ತಿಂಗಳ‌ ಹಿಂದಷ್ಟೇ ರಿಲೀಸ್ ಆಗಿದ್ದ.ಹೀಗೆ ಬಂದಿದ್ದ ಕಿರಾತಕ ದಾವಣಗೆರೆ,ಗದಗ,ಬೆಂಗಳೂರಿನ ಸಿ ಕೆಅಚ್ಚುಕಟ್ಟು,ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ಹಲವೆಡೆ ಸರಗಳ್ಳತನ ಮಾಡಿದ್ದ.ಆರೋಪಿ ಪತ್ತೆಗೆ ಬೆಂಗಳೂರಿನ ಹಲವು ಠಾಣೆ ಪೊಲೀಸರು ಬಲೆ ಬೀಸಿದ್ರು.ತಲೆ ಮರೆಸಿಕೊಂಡಿದ್ದ ಆಸಾಮಿಯನ್ನ ಶೇಶಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ..ಬಂಧಿತನಿಂದ 300 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.ಅದೇನೆ ಹೇಳಿ ಕಾಲಿಗೆ ಗುಂಡೇಟು ಬಿದ್ದ ಮೇಲೂ ಚಾಳಿ ಬಿಟ್ಟಿರಲಿಲ್ಲ..ತಾನಾಗಿಯೂ ಬುದ್ಧಿ ಕಲಿತರಲಿಲ್ಲ..ಕೊನೆಗೆ ಲಾಕ್ ಆಗಿ ಮತ್ತೆ ಜೈಲು ಸೇರಿದ್ದಾನೆ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದುಬೈಯಂತಹ ದೇಶ ನಿರ್ಮಿಸಿರುವ ಬಿಹಾರಿಗಳು ಇಂದು ನಿರುದ್ಯೋಗಿಗಳು: ರಾಹುಲ್ ಗಾಂಧಿ

ಮತಕ್ಕಾಗಿ ಮೋದಿ ನೃತ್ಯ ಮಾಡಕ್ಕೂ ಸೈ ಎಂದ ರಾಹುಲ್ ಗಾಂಧಿ ವಿರುದ್ಧ ದೂರು

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025: ವಿಜೇತರ ಪಟ್ಟಿ, ಪ್ರಶಸ್ತಿ ವಿವರ ಇಲ್ಲಿದೆ

ಬಿಹಾರ ವಿಧಾನಸಭೆ ಚುನಾವಣೆ, ನಾಳೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

ಮುಂದಿನ ಸುದ್ದಿ
Show comments