Webdunia - Bharat's app for daily news and videos

Install App

ಕೊನೆಗೂ ಸಿಎಂ ನಿವಾಸ ಖಾಲಿ ಮಾಡಿದ ಅರವಿಂದ್ ಕೇಜ್ರಿವಾಲ್: ನೌಕರರನ್ನು ಅಪ್ಪಿ ಬೀಳ್ಕೊಟ್ಟ ಮಾಜಿ ಸಿಎಂ

Krishnaveni K
ಶುಕ್ರವಾರ, 4 ಅಕ್ಟೋಬರ್ 2024 (15:19 IST)
Photo Credit: X
ನವದೆಹಲಿ: ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಸಿಎಂ ಅಧಿಕೃತ ನಿವಾಸ ಖಾಲಿ ಮಾಡಿದ್ದು ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಇದಕ್ಕೆ ಮೊದಲು ಅವರು ಮನೆಯ ನೌಕರರನ್ನು ಬಿಗಿದಪ್ಪಿ ಬೀಳ್ಕೊಡುಗೆ ಪಡೆದಿದ್ದಾರೆ.

ತಮ್ಮ ವಯಸ್ಸಾದ ತಂದೆ-ತಾಯಿ ಹಾಗೂ ಪತ್ನಿ ಜೊತೆಗೆ ಕೇಜ್ರಿವಾಲ್ ಸಿಎಂ ಅಧಿಕೃತ ನಿವಾಸದಿಂದ ಹೊರಗೆ ಬರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೆಹಲಿ ಅಬಕಾರಿ ಅಕ್ರಮ ಹಗರಣ ಸಂಬಂಧ ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆದರೆ ಇದುವರೆಗೆ ಸಿಎಂ ಅಧಿಕೃತ ನಿವಾಸದಲ್ಲಿಯೇ ಇದ್ದರು. ಇಂದು ಅಧಿಕೃತ ನಿವಾಸದಿಂದ ಆಪ್ ಮುಖ್ಯ ಕಚೇರಿಯ ಸಮೀಪವಿರುವ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಈ ವೇಳೆ ಇಷ್ಟು ದಿನ ಅವರ ಜೊತೆ ಕೆಲಸ ಮಾಡುತ್ತಿದ್ದ ಎಲ್ಲಾ ನೌಕರರೂ ಸಾಲಾಗಿ ನಿಂತು ಕೇಜ್ರಿವಾಲ್ ರನ್ನು ಬೀಳ್ಕೊಟ್ಟರು. ಪ್ರತಿಯೊಬ್ಬರನ್ನೂ ಬಿಗಿದಪ್ಪಿ ಕೇಜ್ರಿವಾಲ್ ಇಷ್ಟು ದಿನ ತಮಗೆ ಸೇವೆ ಸಲ್ಲಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು.

ಕೇಜ್ರಿವಾಲ್ ಬಳಿಕ ದೆಹಲಿ ಸಿಎಂ ಆಗಿ ಅವರ ಅತ್ಯಾಪ್ತರಾಗಿದ್ದ ಸಚಿವೆ ಅತಿಶಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಕೇಜ್ರಿವಾಲ್ ಮೇಲಿನ ಗೌರವದಿಂದಾಗಿ ಅವರು ಕೂರುತ್ತಿದ್ದ ಸಿಎಂ ಕುರ್ಚಿಯಲ್ಲಿ ಕೂರದೇ ಅವರ ನಿವಾಸವನ್ನೂ ಬಳಸುತ್ತಿಲ್ಲ ಎನ್ನಲಾಗಿದೆ. ನಾನು ಭರತನ ರೀತಿ ದೆಹಲಿ ಆಡಳಿತ ನಡೆಸುತ್ತೇನೆ ಎಂದು ಅತಿಶಿ ಹೇಳಿದ್ದರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಐ ಬ್ರೊ ಮಾಡಿಸಿಕೊಳ್ಳಲು ಪಾರ್ಲರ್‌ಗೆ ಹೋಗಿದ್ದ ಪತ್ನಿಯ ಜಡೆಯನ್ನೇ ಕತ್ತರಿಸಿದ ಪಾಪಿ ಪತಿ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಪರಪ್ಪನ ಅಗ್ರಹಾರ ಫಿಕ್ಸ್‌: ಜಾಮೀನು ಮತ್ತೆ ಅರ್ಜಿ ವಜಾ

Rahul Gandhi: ನೆಹರೂ ತಾತ ನಮ್ಗೆ ರಾಜಕೀಯವೇ ಹೇಳಿ ಕೊಟ್ಟಿಲ್ಲ

ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಗನಸಖಿ ಮೇಲೆ ಅತ್ಯಾಚಾರ, ರೇಪಿಸ್ಟ್‌ ಕೊನೆಗೂ ಅರೆಸ್ಟ್‌

ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ: ಸಾವಿನ ಹಿಂದೆ ಮುಸ್ಲಿಂ ಯುವಕನ ಕಿರುಕುಳ ಆರೋಪ

ಮುಂದಿನ ಸುದ್ದಿ
Show comments