Webdunia - Bharat's app for daily news and videos

Install App

ಸದಾಶಿವನಗರದಲ್ಲಿ ಜಾಲಿ ರೈಡ್ ಮಾಡುತ್ತಿದವರ ಬಂಧನ

Webdunia
ಸೋಮವಾರ, 13 ಸೆಪ್ಟಂಬರ್ 2021 (20:41 IST)
ನಗರದಲ್ಲಿ ಜಾಲಿ ರೈಡ್ ಹಾವಳಿ ಹೆಚ್ಚುತ್ತಿದ್ದು, ಶುಕ್ರವಾರ ರಾತ್ರಿ ಯುವಕ ಹಾಗೂ ಯುವತಿಯರು ಮರ್ಸಿಡೀಸ್ ಬೆಂಝ್ ಕಾರಿನಲ್ಲಿ ರಾಕ್ ಮ್ಯೂಸಿಕ್ ಹಾಕಿಕೊಂಡು ಜಾಲಿ ರೈಡ್ ಮಾಡುತ್ತಿದ್ದ ಐಷಾರಾಮಿ ಕಾರೊಂದನ್ನು ಸದಾಶಿವನಗರ ಸಂಚಾರ ಠಾಣೆ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.  
ಸದಾಶಿವನಗರದ ಯುವಕರು ತಡರಾತ್ರಿ ಕಾರಿನ ಮೇಲಿನ ರೋಪ್ ತೆಗೆದು ಡ್ಯಾನ್ಸ್ ಮಾಡುತ್ತಾ ಪೆÇಲೀಸರ ಎದುರಿಗೆ ಕೂಗಾಡುತ್ತಾ ಅತಿವೇಗವಾಗಿ ಕಾರು ಚಲಾಯಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಎಲ್ಲೆಡೆ ವೈರಲ್ ಆಗುತ್ತಿದೆ. ಸ್ಯಾಂಕಿ ಟ್ಯಾಂಕ್ ಪಕ್ಕದ ರಸ್ತೆಯಲ್ಲಿ ಘಟನೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. 
ತುರ್ತು ಅಗತ್ಯ ಸೇವೆ ಫಲಕ: 
ಯುವಕರು ವಿದ್ಯುತ್ ಕಂಪನಿಯೊಂದರ ಸಿಬ್ಬಂದಿಗಳೆಂದು ಹೇಳಿಕೊಳ್ಳುವುದರ ಜತೆಗೆ ತಮ್ಮ ಕಾರಿನ ಮುಂದೆ ತುರ್ತು ಅಗತ್ಯ ಸೇವೆ ಫಲಕ ಹಾಕಿಕೊಂಡು ಜಾಲಿ ರೈಡ್ ಮಾಡಿದ್ದಾರೆ. ಕಾರಿನ ಹಿಂಭಾಗ ಸೋಹಮ್ ರಿನವೆಬಲ್ ಎನರ್ಜಿ ಪ್ರೈ.ಲಿ. ನಾಮಫಲಕ ಹಾಕಿಕೊಂಡು ಸದಾಶಿವನಗರದ ಹಲವು ಭಾಗಗಳಲ್ಲಿ ಜಾಲಿ ರೈಡಿ ಮಾಡಿದ್ದಾರೆ. ಹೀಗಾಗಿ, ನೈಟ್ ಕಫ್ರ್ಯೂ ಉಲ್ಲಂಘಿಸಿ ಸಂಚಾರ ಮಾಡಿರುವ ಕಾರಣ ಎನ್‍ಡಿಎಂಎ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಕಾರು ಜಪ್ತಿ ಮಾಡಲಾಗಿದೆ ಎಂದು ಪೆÇಲೀಸರು ತಿಳಿಸಿದರು. 
ಈ ಹಿಂದೆ ಇದೇ ರೀತಿ ಹೊಸೂರು ಶಾಸಕ ಪ್ರಕಾಶ್ ಅವರ ಪುತ್ರ ಕರುಣಾಕರ ಹಾಗೂ ಆತನ ಪ್ರೇಯಸಿ ಬಿಂದು ಸೇರಿದಂತೆ ಆರು ಮಂದಿ ಆಡಿ ಕ್ಯೂ-3 ಕಾರಿನಲ್ಲಿ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಕೋರಮಂಗಲದಲ್ಲಿ ಜಾಲಿ ರೈಡ್ ಮಾಡಿದ್ದರು. ಈ ವೇಳೆ ಮಂಗಳ ಕಲ್ಯಾಣ ಮಂಟಪದ ಬಳಿ ಕಾರು ಅಪಘಾತಕ್ಕೀಡಾಗಿ ಏಳು ಮಂದಿಯೂ ಸಾವನ್ನಪ್ಪಿದ್ದರು. ಇದೀಗ ಮತ್ತೆ ಸದಾಶಿವನಗರದಲ್ಲಿ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಉಂಟು ಮಾಡಿದೆ. ಪೆÇಲೀಸರ ಕರ್ತವ್ಯ ನಿರ್ವಹಣೆ ಬಗ್ಗೆಯೂ ಸಾರ್ವಜನಿಕ ವಲಯ ಸಂಶಯ ವ್ಯಕ್ತಪಡಿಸಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments