Publish Date: Tue, 09 Aug 2022 (18:23 IST)
Updated Date: Tue, 09 Aug 2022 (18:26 IST)
4 ಮಂದಿ ಅಂತರ್ ರಾಜ್ಯ ಕಳ್ಳರನ್ನ ಬಂಧನ ಮಾಡಲಾಗಿದ್ದು, 9.5 ಲಕ್ಷ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.ಪುರುಷೋತ್ತಮ್ ನಾಯ್ಕ್ (19), ಜೀವನ್, (19) ಸಚೀನ್ (22), ಪುನೀತ್ ನಾಯ್ಕ್ (22) ಬಂಧಿತರು..ಇನ್ನು ಬಂಧಿತರು ದಾವಣಗೆರೆ ಜಿಲ್ಲೆಯ ನಾಗರಕಟ್ಟೆ ನಿವಾಸಿಗಳಾಗಿದ್ದು,ಬಂಧಿತರಿಂದ 9.5 ಲಕ್ಷ ಮೌಲ್ಯದ 188 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.ಇನ್ನು ಹೊಳಲ್ಕೆರೆ ಸಿಪಿಐ ರವೀಶ್ ಹಾಗೂ ಪಿಎಸ್ಐ ಬಾಹುಬಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು,ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.