Webdunia - Bharat's app for daily news and videos

Install App

ಆಪ್ತಮಿತ್ರ ಸಿನಿಮಾ ಕತೆ ಹೇಳಿ ಯುವತಿಗೆ ವಂಚಿಸಿದ ಜ್ಯೋತಿಷಿ ಅರೆಸ್ಟ್

Webdunia
ಬುಧವಾರ, 21 ಆಗಸ್ಟ್ 2019 (12:12 IST)
ಬೆಂಗಳೂರು : ಆಪ್ತಮಿತ್ರ ಸಿನಿಮಾದ ಕತೆಯಂತೆ ಮರುಜನ್ಮದ ಕತೆ ಹೇಳಿ ಯುವತಿಯೊಬ್ಬಳನ್ನು ಜ್ಯೋತಿಷಿಯೊಬ್ಬ ಯಾಮಾರಿಸಿ ವಂಚನೆ ಮಾಡಿದ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ.




ಸ್ವಾಮಿ ವೆಂಕಟ ಕೃಷ್ಣಾಚಾರ್ಯ (28)  ಡೋಂಗಿ ಜ್ಯೋತಿಷಿಯಾಗಿದ್ದು, ಈತ ಶ್ರೀನಿವಾಸನಗರದ ಮನೆಯೊಂದರಲ್ಲಿ ವಾಸ್ತುದೋಷವಿದೆ ಎಂದು ಹೋಮ ಮಾಡಿಸಿ ಅದೇ ಮನೆ ಯುವತಿಯೊಂದಿಗೆ ಚಾಟಿಂಗ್ ಮಾಡುತ್ತಿದ್ದ. ಕಳೆದ ಜನ್ಮದಲ್ಲಿ ನಾವಿಬ್ಬರೂ ಗಂಡ ಹೆಂಡತಿಯಾಗಿದ್ದೆವು. ಕಳೆದ ಜನ್ಮದಲ್ಲಿ ನೀನು ಭರತನಾಟ್ಯದ ಕಲಾವಿದೆಯಾಗಿದ್ದೆ. ನಾನೇ ನಿನ್ನ ಸಾವಿಗೆ ಕಾರಣನಾಗಿದ್ದೆ. ಈ ಜನ್ಮದಲ್ಲಿ ಕಾರಣಾಂತರಗಳಿಂದ ದೂರ ಆಗಿದ್ದೇವೆ. ನೀನು ನನ್ನ ಮದುವೆಯಾದಾಗ ಮಾತ್ರ ನನಗೆ ಮೋಕ್ಷ ಎಂದು ಆ ಯುವತಿಯ ಬಳಿ ಪುನರ್ಜನ್ಮದ ಕತೆ ಹೇಳಿ ಜ್ಯೋತಿಷಿ ಆ ಯುವತಿಯನ್ನು ನಂಬಿಸಿದ್ದ.


ಅಲ್ಲದೇ ಆಕೆಯನ್ನೇ ಮದುವೆಯಾಗುವುದಾಗಿ ನಂಬಿಸಿ, ಆಕೆಯ ಹೆಸರಲ್ಲಿ 30 ಲಕ್ಷ ಸಾಲ ಪಡೆದಿದ್ದ. ಪೊಲೀಸರಿಗೆ ದೂರು ನೀಡಿದರೆ ತನ್ನ ತಪೋಶಕ್ತಿಯಿಂದ ಕೈ-ಕಾಲು ಬೀಳಿಸುವುದಾಗಿ ಆಕೆ ಹಾಗೂ ಆಕೆಯ ಮನೆಯವರಿಗೆ ಬೆದರಿಕೆಯೊಡ್ಡಿದ್ದ. ಆದರೆ ಇದೀಗ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ದೂರು ದಾಖಲಿಸಿದ ಹಿನ್ನಲೆಯಲ್ಲಿ ಇದೀಗ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments