Publish Date: Thu, 17 Sep 2026 (16:27 IST)
Updated Date: Thu, 17 Sep 2026 (16:29 IST)
ಮಂಗಳೂರು: ಮುಸ್ಲಿಮರೇ ಫಸ್ಟ್ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿ ವಿವಾದಕ್ಕೆ ಗುರಿಯಾಗಿದ್ದ ತುಳು ಹಾಸ್ಯ ನಟ ಅರವಿಂದ ಬೋಳಾರ್ ಈಗ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಅರವಿಂದ ಬೋಳಾರ್ ಮುಸ್ಲಿಮರನ್ನು ಹೊಗಳುವ ಭರದಲ್ಲಿ ನಾನು ಎಲ್ಲೇ ಹೋದರೂ ಇದನ್ನು ಹೇಳುತ್ತೇನೆ. ನನಗೆ ಮುಸ್ಲಿಮರೇ ಮೊದಲು ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಅರವಿಂದ ಬೋಳಾರ್ ಮೂಲತಃ ಹಿಂದೂ. ಅವರ ಕಾರ್ಯಕ್ರಮಗಳನ್ನು ಕೇವಲ ಮುಸ್ಲಿಮರು ಮಾತ್ರ ನೋಡಲಿಲ್ಲ. ಹಿಂದೂಗಳೇ ಹೆಚ್ಚು ನೋಡಿ ಮೆಚ್ಚಿಕೊಂಡಿದ್ದರು. ಆದರೆ ಈಗ ಮುಸ್ಲಿಮರೇ ಮೊದಲು ಎಂದಿದ್ದು ಸರಿಯಲ್ಲ ಎಂದು ಹಲವರು ಛೀಮಾರಿ ಹಾಕಿದ್ದರು.
ಇದರ ಬೆನ್ನಲ್ಲೇ ಈಗ ವಿಡಿಯೋ ಸಂದೇಶ ಮೂಲಕ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ನಮಸ್ಕಾರ, ನಾನು ನಿಮ್ಮ ಪ್ರೀತಿಯ ಅರವಿಂದ ಬೋಳಾರ್. ಸರ್ವಧರ್ಮದ ಜನರು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದವರು. ಆದರೆ ನಾನು ಮೊನ್ನೆ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ನಮ್ಮ ಜನರಿಗೆ ಬೇಸರ ತಂದಿದೆ ಎಂದು ನನಗೆ ಗೊತ್ತಾಗಿದೆ. ಆದರೆ ನಾನು ಮೂಲತಃ ಹಿಂದೂ ಧರ್ಮ. ಹಿಂದೂ ಧರ್ಮ ನನ್ನ ತಾಯಿ. ಹಾಗಾಗಿ ಆ ಧರ್ಮಕ್ಕೆ ನೋವು ಮಾಡುವ ಯಾವ ಉದ್ದೇಶದಿಂದಲೂ ಹೇಳಿಕೆ ನೀಡಲಿಲ್ಲ. ನನ್ನಿಂದಾಗಿ ಬೇಸರವಾಗಿದ್ದರೆ ಕ್ಷಮಿಸಿ, ಮುಂದೆಯೂ ನನಗೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಕೊಡಿ ಎಂದು ಮನವಿ ಮಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ