Publish Date: Sat, 03 Dec 2022 (12:38 IST)
Updated Date: Sat, 03 Dec 2022 (12:42 IST)
ಬೆಂಗಳೂರಿನಲ್ಲಿ ಮಾತ್ರ ರೌಡಿಗಳು ಸೇರ್ಪಡೆ ಆಗುತ್ತಿಲ್ಲ.ಅರಮನೆ ನಗರಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯಲ್ಲಿ ಬಿಜೆಪಿಗೆ ರೌಡಿ ಸೇರ್ಪಡೆಯಾಗ್ತಿದ್ದಾರೆ.ಕುಖ್ಯಾತ ರೌಡಿ ಶೀಟರ್ ಬೆತ್ತನಗೆರೆ ಶಂಕರ್ ಬಿಜೆಪಿಗೆ ಸೇರ್ಪಡೆಯಾಗಿದ್ದು,ರೌಡಿ ಶೀಟರ್ ಬೆತ್ತನೆಗೆರೆ ಶಂಕರ್ ಗೆ ಮಣಿ ಹಾಕಿದ್ದು ಯಾರು..?ಬಿಜೆಪಿ ಪಕ್ಷಕ್ಕೆ ಶಂಕರ್ ಕರೆತಂದವರು ಯಾರು..?ಹೆಚ್.ಡಿ.ಕೋಟೆ ಬಿಜೆಪಿ ಟಿಕೆಟ್ ಗಿಟ್ಟಿಸೋಕೆ ಈ ಪ್ಲಾನ್ ಮಾಡಿದ್ರಾ?ಶಂಕರ್ ಜೊತೆ ಸ್ಥಳೀಯ ನಾಯಕ ಪಾಪಣ್ಣ ಮಾತುಕತೆ ನಡೆಸಿದ್ರಾ?ಅದಕ್ಕೆ ಬಿಜೆಪಿ ಪ್ರ.ಕಾರ್ಯದರ್ಶಿ ಸಿದ್ದರಾಜು ಸಾಥ್ ನೀಡಿದ್ರಾಅಂತರಸಂತೆ ಜಿಲ್ಲಾಪಂಚಾಯತ್ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ರಾ?ಈ ಮೂಲಕ ಶಂಕರನನ್ನ ಹೆಚ್.ಡಿ.ಕೋಟೆಗೆ ಕರೆತಂದಿದ್ರಾ?ಬೆಂಗಳೂರಿನ ಬೆತ್ತನಗೆರೆಯಿಂದ ಹೆಚ್.ಡಿ.ಕೋಟೆಗೆ ಕರೆತಂದಿದ್ರಾ?ಪಕ್ಷಕ್ಕೆ ರೌಡಿ ಶೀಟರ್ ಕಳಂಕ ಅಂಟಿಕೊಳ್ಳಲು ಕಾರಣರಾದ್ರಾ?ಹೀಗೆ ನೂರಾರು ಪ್ರಶ್ನೆ ಕಾಡತೋಡಗಿದೆ.ಮೊನ್ನೆಯಷ್ಟೇ ಮೈಸೂರಿನಲ್ಲಿ ಶಂಕರ್ ಪಕ್ಷ ಸೇರಿದರು.ಶಂಕರ್ ಸೇರ್ಪಡೆಯಿಂದ ಹಿರಿಯರಿಗೆ ಅಸಮಾಧಾನ ಶುರುವಾಗಿದೆ.