Webdunia - Bharat's app for daily news and videos

Install App

ಅಣ್ಣಾಮಲೈ ಕರ್ನಾಟಕ್ಕೆ ಬನ್ನಿ, ಎಲ್ಲೇ ನಿಂತ್ರೂ ಗೆದ್ದೇ ಗೆಲ್ಲಿಸ್ತೀವಿ: ಅಭಿಮಾನಿಗಳ ಪೋಸ್ಟ್‌ ವೈರಲ್ ‌

sampriya
ಶುಕ್ರವಾರ, 7 ಜೂನ್ 2024 (10:47 IST)
Photo By X
ಬೆಂಗಳೂರು: ಕೊಯಮತ್ತೂರು ಕ್ಷೇತ್ರದಿಂದ ಲೋಕಸಭೆ ಚುನಾವಣಾ ಅಖಾಡಕ್ಕಿಳಿದ ಕೆ.ಅಣ್ಣಾಮಲೈ ಅವರ ಸೋಲಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅವರ ಅಭಿಮಾನಿಗಳು ತುಂಬಾನೇ ನೋವು ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಬೆಂಬಲಿಸಿದ್ದಾರೆ.

ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾಮಲೈ ಸೋಲಿನ ಬಗ್ಗೆ ಅವರ ಅಭಿಮಾನಿಗಳು ನೋವು ವ್ಯಕ್ತಪಡಿಸುತ್ತಾ, ನೀವು ಕರ್ನಾಟಕದ ಯಾವುದೇ ಮೂಲೆಯಲ್ಲೂ ನಿಲ್ಲುತ್ತಿದ್ದರು ಗೆಲ್ತಿದ್ರಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ ವೈರಲ್‌ ಆಗಿದೆ. ಪೋಸ್ಟ್‌ನಲ್ಲಿ ಹೀಗಿದೆ, ಈ ವ್ಯಕ್ತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಿಂತಿದ್ರೂ ಗೆಲ್ತಿದ್ರು, ಎಲ್ಲೇ ಸ್ಪರ್ಧೆಗೆ ನಿಲ್ಲುತ್ತಿದ್ದರು ಗೆಲ್ಲಬೇಕಿತ್ತು. ಅನ್ಯಾಯವಾಗಿ ಸೋಲಿಸಿದಿರಲ್ಲ, ಶಿಕ್ಷಿತರಿಗೆ ರಾಜಕೀಯದೊಳಗೆ ಭವಿಷ್ಯ ಇಲ್ಲ, ಆಂಧ್ರಪ್ರದೇಶದ ಮುಂದಿನ ಪರಿಸ್ಥಿತಿ ಏನು, ಇನ್ನು ಮುಂದಿನ ದಿನಗಳಲ್ಲಿ ಏನೇನೂ ನೋಡಬೇಕು ಈ ಕಣ್ಣಲ್ಲಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನೂ ಸೋಲಿನ ಬಗ್ಗೆ ನೋವು ವ್ಯಕ್ತಪಡಿಸಿದ ಅಣ್ಣಾಮಲೈ ಅವರ ವಿಡಿಯೋ ಹಂಚಿದ ಅವರ ಅಭಿಮಾನಿಗಳು, ಒಂದು ವಜ್ರ ತಯಾರ್ ಆಗೋಕೆ ಸಮಯ ಬೇಕು ಸರ್‌, ಪ್ಲಾಸ್ಟಿಕ್ ಕವರ್ ರೆಡಿ ಆಗೋಕೆ ಜಾಸ್ತಿ ಸಮಯ ಬೇಕಾಗಿಲ್ಲ, ನೀವು ಎದೆಗುಂದಾಬೇಡಿ ಎಂದು ಸಮಾಧಾನ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಬನ್ನಿ ಗೆದ್ದೇ ಗೆಲ್ಲಿಸ್ತೀವಿ ನಿಮ್ಮನ್ನು, ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ಜೈ ಅಣ್ಣಾಮಲೈ ಎಂದು ಬರೆದು ಹುರಿದುಂಬಿಸುತ್ತಿದ್ದಾರೆ.

ಅಣ್ಣಾಮಲೈ ಅವರು ಉಡುಪಿಯಲ್ಲಿ ಮಾಜಿ ಎಸ್‌ಪಿ ಅಧಿಕಾರಿಯಾಘಿ ಕರ್ತವ್ಯ ನಿರ್ವಹಿಸಿ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments