Webdunia - Bharat's app for daily news and videos

Install App

ತಂಗಿಯನ್ನ ಪ್ರೀತಿಸಿ ಮದುವೆಯಾದವನ ಕೈ ಕಟ್ ಮಾಡಿದ ಅಣ್ಣ

Webdunia
ಶುಕ್ರವಾರ, 16 ಆಗಸ್ಟ್ 2019 (17:32 IST)
ತನ್ನ ತಂಗಿಯನ್ನ ಪ್ರೀತಿಸಿ ವಿವಾಹವಾಗಿದ್ದ ಎಂಬ ಕಾರಣಕ್ಕೆ ಭಾವನಿಗೆ ಚಾಕುವಿನಿಂದ ಹಲ್ಲೆ ಮಾಡಿ ಬೆರಳನ್ನು ಕತ್ತರಿಸಿದ ಘಟನೆ ನಡೆದಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೀಣ್ಯ ನಿವಾಸಿ ಹನುಮಂತ ಹಲ್ಲೆಗೊಳಗಾಗಿರುವ ವ್ಯಕ್ತಿ. ಸಂತೋಷ್ ಹಲ್ಲೆ ಮಾಡಿದ ಆರೋಪಿ.

 ಗಾಯಗೊಂಡಿರೋ ಹನುಮಂತ ಸಂತೋಷನ ಅತ್ತೆಯ ಮಗನೇ ಆಗಿದ್ದಾನೆ. 2018 ರಲ್ಲಿ ಸಂತೋಷನ ತಂಗಿ ಸಂಗೀತಾ ಹಾಗು ಹನುಮಂತ  ಮನೆಯಲ್ಲಿ ಗೊತ್ತಿಲ್ಲದೆ ಪ್ರೇಮ ವಿವಾಹವಾಗಿ ಬೇರೆಡೆ ವಾಸವಿದ್ದರು ಎನ್ನಲಾಗಿದೆ.  ಕಾರೊಂದನ್ನು ವಾಪಸ್ಸು ನೀಡಲು ಬಂದಾಗ ಅದೇ  ಸಂದರ್ಭದಲ್ಲಿ ಸಂಗೀತಾಳ ಅಣ್ಣ ಸಂತೋಷ ಹಾಗು ಸ್ನೇಹಿತ ಪ್ರೇಮ್ ಕೂಡಿಕೊಂಡು  ಹನುಮಂತನನ್ನು ಪಕ್ಕಕ್ಕೆ ಕರೆದು ಕೈ ಬೆರಳನ್ನು ಕಟ್ ಮಾಡಿದ್ದಾರೆ. ಸಂತೋಷ್ ಹನುಮಂತನ ಎದೆಗೆ ಚಾಕುವಿನಿಂದ ಇರಿಯುವ ಸಂದರ್ಭದಲ್ಲಿ ತಡೆಯೊಡ್ಡಿದಾಗ ಹನುಮಂತನ ಎಡಗೈಗೆ ಹರಿತವಾದ ಚಾಕುವಿನಿಂದ ಕಿರುಬೆರಳು ತುಂಡಾಗಿದೆ.

ಸಂಗೀತಾಳ ಪ್ರೇಮ ವಿವಾಹದಿಂದ ರೊಚ್ಚಿಗೆದ್ದು ಹನುಮಂತನಿಗಾಗಿ ಕಾಯುತ್ತಲಿದ್ದ ಸಂತೋಷ ಮಾರಣಾಂತಿಕವಾಗಿ ಹಲ್ಲೆಗೆ ಯತ್ನಿಸಿದ್ದನು. ಪರಪ್ಪನ ಅಗ್ರಹಾರಕ್ಕೆ ಬೆರಳು ಕತ್ತರಿಸಿದ ಸ್ಥಿತಿಯಲ್ಲಿ ಗಾಯಾಳು ಹನುಮಂತ ಪೊಲೀಸ್ ಠಾಣೆಗೆ ಭೇಟಿನೀಡಿ ದೂರು ದಾಖಲಿಸಿದ್ದಾನೆ. ಕೂಡಲೇ ಎಚ್ಚೆತ್ತ ಪರಪ್ಪನ ಅಗ್ರಹಾರ ಪೊಲೀಸರು ಆರೋಪಿಗಳಾದ ಸಂತೋಷ್, ಪ್ರೇಮ್ ನನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಮುಂದಿನ ಸುದ್ದಿ
Show comments