Webdunia - Bharat's app for daily news and videos

Install App

ಅನ್ನಭಾಗ್ಯ ಯೋಜನೆ ಹಣಕ್ಕಾಗಿ ಎದಿರು ನೋಡುತ್ತಿರುವ ಫಲಾನುಭವಿಗಳಿಗೆ ಗೋತಾ: ಸರ್ಕಾರಕ್ಕೆ ಹಿಡಿಶಾಪ

Krishnaveni K
ಸೋಮವಾರ, 11 ನವೆಂಬರ್ 2024 (15:54 IST)
ಬೆಂಗಳೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಕಳೆದ ಎರಡು ತಿಂಗಳಿನಿಂದ ಹಣ ಬರದೇ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಅತ್ತ ಹಣವೂ ಕ್ರೆಡಿಟ್ ಆಗಿಲ್ಲ, ಇತ್ತ ಅಕ್ಕಿಯೂ ಸಿಕ್ಕಿಲ್ಲ ಎಂಬ ಸ್ಥಿತಿ ಫಲಾನುಭವಿಗಳದ್ದಾಗಿದೆ. ಅಕ್ಕಿ, ಹಣದ ಬದಲು ಬೇರೆ ಬೇಳೆಯಾದರೂ ಕೊಡಿ ಎಂದರೂ ಕೊಡುತ್ತಿಲ್ಲ. ಈ ಚಂದಕ್ಕೆ ಅನ್ನಭಾಗ್ಯ ಯೋಜನೆ ಯಾಕೆ ಘೋಷಣೆ ಮಾಡಬೇಕಿತ್ತು ಎಂದು ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ 5 ಕೆ.ಜಿ. ಅಕ್ಕಿ ಮತ್ತು ಉಳಿದ 5 ಕೆ.ಜಿ ಬಾಬ್ತು ಹಣ ನೀಡುತ್ತಿತ್ತು. ಇದು ನೇರವಾಗಿ ಫಲಾನುಭವಿಗಳ ಖಾತೆಗೆ ಕ್ರೆಡಿಟ್ ಆಗುತ್ತಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ಹಣ ಕ್ರೆಡಿಟ್ ಆಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಇದರ ಬಗ್ಗೆ ಪಡಿತರ ವಿತರಕರಿಂದಲೂ ಅಸಮಾಧಾನ ಕೇಳಿಬಂದಿದೆ. ಸರ್ಕಾರ ಹಣ ನೀಡಿಲ್ಲ ಎಂದು ಪ್ರತಿನಿತ್ಯ ನಮ್ಮ ಬಳಿ ಬಂದು ಸಾರ್ವಜನಿಕರು ವಾಗ್ವಾದ ಮಾಡುತ್ತಾರೆ. ಸರ್ಕಾರ ಕೊಡದೇ ಹೋದರೆ ನಾವು ಏನು ಮಾಡೋಣ ಎನ್ನುವುದು ಅವರ ಅಳಲು. ಇತ್ತೀಚೆಗಷ್ಟೇ ಸಚಿವ ಮುನಿಯಪ್ಪ 5 ಕೆ.ಜಿ. ಅಕ್ಕಿಯ ಹಣದ ಬದಲು ಬೇಳೆ, ಎಣ್ಣೆ ಕೊಡ್ತೀವಿ ಎಂದಿದ್ದರು. ಅದೇ ಕಾರಣಕ್ಕೆ ಈ ಅಡಚಣೆಯಾಗಿದೆಯೇ ಎಂದು ತಿಳಿದುಬಂದಿಲ್ಲ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ನಮ್ಮ ದೇಶದಲ್ಲಿನ್ನು ಪಾಕಿಸ್ತಾನ ಧ್ವಜ, ಸರಕು ಮಾರಾಟ ಮಾಡುವಂತಿಲ್ಲ

ಸೋಫಿಯಾ ಖುರೇಷಿ ವಿರುದ್ಧ ನಾಲಗೆ ಹರಿಬಿಟ್ಟ ಸಚಿವ ವಿಜಯ್ ಶಾಗೆ ಕ್ಲಾಸ್‌ ತೆಗೆದುಕೊಂಡ ಸುಪ್ರೀಂಕೋರ್ಟ್‌

ಪಾಕ್‌ನಲ್ಲಿ ಜಲಕ್ಷಾಮದ ಭೀತಿ: ಸಿಂಧೂ ಜಲಒಪ್ಪಂದ ಅಮಾನತು ಮರು ಪರಿಶೀಲನೆಗೆ ಗೋಗರೆಯುತ್ತಿರುವ ಪಾಕ್‌

ಯುದ್ಧದ ಕ್ರೆಡಿಟ್ ದೇಶದ ಎಲ್ಲಾ ಸೈನಿಕರಿಗೆ ಹೋಗಲಿ, ಮೋದಿಗೆ ಯಾಕೆ: ಸಂತೋಷ್ ಲಾಡ್

ಮುಸ್ಲಿಮರು ಬಹುಪತ್ನಿಯರನ್ನು ಹೊಂದಬಹುದು: ಅಲಹಾಬಾದ್ ಕೋರ್ಟ್ ತೀರ್ಪು

ಮುಂದಿನ ಸುದ್ದಿ
Show comments