Select Your Language

Notifications

webdunia
webdunia
webdunia
webdunia

ಆಂಧ್ರ ಕಾಂಗ್ರೆಸ್ ನಾಯಕಿ ಶರ್ಮಿಳಾ-ಡಿಕೆ ಶಿವಕುಮಾರ್ ಗುಪ್ತ್ ಗುಪ್ತ್ ಮೀಟಿಂಗ್

YS Sharmila-DK Shivakumar

Krishnaveni K

ಬೆಂಗಳೂರು , ಬುಧವಾರ, 10 ಏಪ್ರಿಲ್ 2024 (14:23 IST)
ಬೆಂಗಳೂರು: ಆಂಧ್ರ ಪ್ರದೇಶ ಕಾಂಗ್ರೆಸ್ ನಾಯಕಿ ವೈಎಸ್ ಶರ್ಮಿಳಾ ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ದಿಡೀರ್ ಆಗಿ ಭೇಟಿಯಾಗಿದ್ದಾರೆ.

ಸದಾಶಿವನಗರದ ಡಿಕೆ ಶಿವಕುಮಾರ್ ನಿವಾಸಕ್ಕೆ ಶರ್ಮಿಳಾ ಆಗಮಿಸಿದ್ದಾರೆ. ಈ ವೇಳೆ ಇಬ್ಬರೂ ಕೆಲವು ಹೊತ್ತು ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಡಿಕೆಶಿ ಸಹೋದರ ಡಿಕೆ ಸುರೇಶ್ ಕೂಡಾ ಉಪಸ್ಥಿತರಿದ್ದರು.

ತಮ್ಮಿಬ್ಬರ ಭೇಟಿಯ ಮುಖ್ಯ ಉದ್ದೇಶವೇನು ಎಂಬುದನ್ನು ಇಬ್ಬರೂ ಮಾಧ್ಯಮಗಳ ಮುಂದೆ ಗುಟ್ಟ ಬಿಟ್ಟುಕೊಟ್ಟಿಲ್ಲ. ಈ ಮೊದಲು ತಮ್ಮದೇ ಪಕ್ಷ ಸ್ಥಾಪಿಸಿದ್ದ ಶರ್ಮಿಳಾ ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಅವರ ಸೇರ್ಪಡೆ ಆಂಧ್ರದಲ್ಲಿ ದೊಡ್ಡ ಬಲ ಬಂದಂತಾಗಿತ್ತು.

ಶರ್ಮಿಳಾ ಆಂಧ‍್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಕಿರಿಯ ಸಹೋದರಿ. ಇದೀಗ ಲೋಕಸಭೆ ಚುನಾವಣೆಯಲ್ಲಿ ಆಂಧ್ರದಲ್ಲಿ ಕಾಂಗ್ರೆಸ್ ನ ಉಸ್ತುವಾರಿ ವಹಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಹೆಸರಿನಲ್ಲಿ ಕೋಮುಭಾವನೆ ಕೆರಳಿಸುವ ಸುದ್ದಿ ಹಂಚಿಕೆ: ದೂರು ನೀಡಿದ ಸಿಎಂ