Select Your Language

Notifications

webdunia
webdunia
webdunia
webdunia

ಭಾಗ್ಯ ನೀವು ಕೊಡಿ, ಗ್ಯಾಸ್ ಪ್ರಧಾನಿ ಕೊಡ್ತಾರೆ: ಅನಂತ್ ಕುಮಾರ್ ವ್ಯಂಗ್ಯ

ಭಾಗ್ಯ ನೀವು ಕೊಡಿ, ಗ್ಯಾಸ್ ಪ್ರಧಾನಿ ಕೊಡ್ತಾರೆ: ಅನಂತ್ ಕುಮಾರ್ ವ್ಯಂಗ್ಯ
ಹುಬ್ಬಳ್ಳಿ , ಶನಿವಾರ, 17 ಜೂನ್ 2017 (16:00 IST)
ರಾಜ್ಯ ಸರಕಾರ "ಸಿಎಂ ಅನಿಲ ಭಾಗ್ಯ" ಯೋಜನೆ ಜಾರಿಗೆ ತರುತ್ತಿದೆ. ಭಾಗ್ಯ ನೀವು ಕೊಡಿ, ಗ್ಯಾಸ್ ಪ್ರಧಾನಿ ಕೊಡ್ತಾರೆ: ರಾಜ್ಯ ಸರಕಾರದ ಯೋಜನೆ ಬಗ್ಗೆ ಸಚಿವ ಅನಂತ್ ಕುಮಾರ್ ವ್ಯಂಗ್ಯವಾಡಿದ್ದಾರೆ.
 
ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯ ಸರಕಾರ ಕೇವಲ ಭಾಗ್ಯ ಕೊಟ್ಟಿದೆ. ಅಕ್ಕಿಯನ್ನು ಕೇಂದ್ರ ಸರಕಾರ ಕೊಡುತ್ತಿದೆ. ಕೇಂದ್ರ ಸರಕಾರ ಪ್ರತಿ ವರ್ಷ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.
 
ಜಗತ್ತೇ ಭಾರತದತ್ತ ಅಚ್ಚರಿಯಿಂದ ನೋಡುತ್ತಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರಕಾರ ಭ್ರಷ್ಟಾಚಾರ ರಹಿತವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸುತ್ತಿದ್ದಾರೆ ಎಂದರು.
 
ಕೇಂದ್ರ ಸರಕಾರದ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ತನ್ನ ಯೋಜನೆಯೆಂದು ಜನತೆಯ ಮುಂದೆ ಬಿಂಬಿಸಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಲೇವಡಿ ಮಾಡಿದ್ದಾರೆ. 

 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇತಿಹಾಸದಲ್ಲಿಯೇ ಭಾರತ ಎಂದೂ ಇಂತಹ ಪ್ರಧಾನಿ ಕಂಡಿಲ್ಲ : ಯಡಿಯೂರಪ್ಪ