Publish Date: Mon, 26 Mar 2018 (07:13 IST)
Updated Date: Mon, 26 Mar 2018 (12:34 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೊಸ ಹೆಸರನ್ನೂ ನಾಮಕರಣ ಮಾಡಿದ್ದಾರೆ.
ಹಿಂದೂ ವಿರಾಟೋತ್ಸವ ವೇದಿಕೆಯಲ್ಲಿ ಮಾತನಾಡಿದ ಸಚಿವ ಅನಂತ ಕುಮಾರ್ ಹೆಗ್ಡೆ ಸಿಎಂ ಸಿದ್ದರಾಮಯ್ಯರನ್ನು ಛಿದ್ರರಾಮಯ್ಯ ಎಂದು ಕರೆದಿದ್ದಾರೆ. ಸಮಾಜ ಒಡೆಯುವ ಛಿದ್ರರಾಮಯ್ಯ ಎಂದಿದ್ದಾರೆ.
‘ಪಾಕಿಸ್ತಾನವನ್ನು ಮಣಿಸುವುದು ಭಾರತಕ್ಕೆ ಕಷ್ಟವೇನಲ್ಲ. ಆದರೆ ಸಮಾಜ ಒಡೆಯುವಂತಹ ಛಿದ್ರರಾಮಯ್ಯರನ್ನು ಮೊದಲು ಸೋಲಿಸಬೇಕು’ ಎಂದು ಸಚಿವರು ಕಿಡಿಕಾರಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಅವರು ಸಿಎಂ ಸಿದ್ದರಾಮಯ್ಯ ಎನ್ನುವ ಬದಲು ಛಿದ್ರರಾಮಯ್ಯ ಎಂದೇ ಕರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ