Select Your Language

Notifications

webdunia
webdunia
webdunia
webdunia

ಪರಿವರ್ತನಾ ಯಾತ್ರೆ ವಿಫಲಕ್ಕೆ ರಾಜ್ಯ ಸರಕಾರ ಷಡ್ಯಂತ್ರ: ಅನಂತಕುಮಾರ ಹೆಗಡೆ

ಪರಿವರ್ತನಾ ಯಾತ್ರೆ ವಿಫಲಕ್ಕೆ ರಾಜ್ಯ ಸರಕಾರ ಷಡ್ಯಂತ್ರ: ಅನಂತಕುಮಾರ ಹೆಗಡೆ
ಬೆಂಗಳೂರು , ಭಾನುವಾರ, 5 ನವೆಂಬರ್ 2017 (12:15 IST)
ರಾಜ್ಯ ಸರಕಾರ ಕೃತಕವಾಗಿ ಟ್ರಾಫಿಕ್ ಜಾಮ್ ಮಾಡಿ ಗೊಂದಲ ಸೃಷ್ಟಿಸಿತ್ತು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರೂ ಹೆಲಿಕಾಪ್ಟರ್ ಕಳುಹಿಸುವಲ್ಲಿ ಸರಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿತು ಎಂದು ಕಿಡಿಕಾರಿದ್ದಾರೆ.
 
ಬಿಜೆಪಿ ಪರಿವರ್ತನಾ ಯಾತ್ರೆಗೆ ಬರುವ ಲಕ್ಷಾಂತರ ಜನರನ್ನು ಸರಕಾರ ತಡೆಹಿಡಿದಿದೆ. ಇಲ್ಲವಾದಲ್ಲಿ ಮೂರು, ನಾಲ್ಕು ಲಕ್ಷ ವರ್ಷಗಳ ಜನ ಯಾತ್ರೆಗೆ ಸೇರುತ್ತಿದ್ದರು ಎಂದು ತಿಳಿಸಿದ್ದಾರೆ.
 
ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಮನೆಮುರುಕ ಸರಕಾರವಾಗಿದೆ. ಮನೆಮರಿಯುವುದು ಕಾಂಗ್ರೆಸ್‌ನವರಿಗೆ ಹೊಸದಲ್ಲ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿದೆ ಎನ್ನುವ ಹುಚ್ಚು ಭ್ರಮೆಯಲ್ಲಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ಜ್ಞಾನೋದಯವಾಗಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗಾಯುತ ಸ್ವತಂತ್ರ ಧರ್ಮ ಸಮಾವೇಶಕ್ಕೆ ಚಾಲನೆ