ಶಿರೂರಿನಲ್ಲಿ ಅರ್ಜುನನಿಗಾಗಿ ಇಂದು ಮತ್ತೆ ಹುಡುಕಾಟಕ್ಕೆ ಸಿಕ್ಕಿದೆ ಮಹತ್ವದ ಮುನ್ನಡೆ

Krishnaveni K
ಬುಧವಾರ, 14 ಆಗಸ್ಟ್ 2024 (10:24 IST)
ಶಿರೂರು: ಗುಡ್ಡಕುಸಿತದಲ್ಲಿ ಶಿರೂರಿನಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಟ್ರಕ್ ಡ್ರೈವರ್ ಅರ್ಜುನ ಸೇರಿದಂತೆ ಉಳಿದವರ ಪತ್ತೆಗೆ ಇಂದಿನಿಂದ ಮತ್ತೆ ಕಾರ್ಯಾಚರಣೆ ಚುರುಕಾಗಲಿದೆ.
 

ಈಶ್ವರ ಮಲ್ಪೆ ನೇತೃತ್ವದಲ್ಲಿ ಇಂದು ಮುಳುಗು ತಜ್ಞರು ಗಂಗಾವಳಿ ನದಿಯಲ್ಲಿ ಹುಡುಕಾಟ ನಡೆಸಲಿದ್ದಾರೆ. ನಿನ್ನೆ ಈಶ್ವರ ಮಲ್ಪೆ ಒಬ್ಬರೇ ಗಂಗಾವಳಿ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಲಾರಿಯ ಅವಶೇಷ ಪತ್ತೆಯಾಗಿತ್ತು. ಇದು ಅರ್ಜುನ್ ಲಾರಿಯದ್ದೇ ಅವಶೇಷ ಎಂದು ಖಚಿತಪಡಿಸಲಾಗಿದೆ.

ಹೀಗಾಗಿ ಅರ್ಜುನ್ ಕುಟುಂಬದವರಲ್ಲಿ ಈಗ ಹೊಸ ಭರವಸೆ ಮೂಡಿದೆ. ಅರ್ಜುನ್ ಮೃತದೇಹ ಸಿಕ್ಕಬಹುದು ಎಂದು ಆಶಾಭಾವನೆ ಮೂಡಿದೆ. ಈ ಮೊದಲು ಲಾರಿ ಅವಶೇಷ ಸಿಕ್ಕ ಜಾಗದಿಂದಲೇ ಈಶ್ವರ ಮಲ್ಪೆ ಮತ್ತು ತಂಡದ ಹುಡುಕಾಟ ಆರಂಭವಾಗಿದೆ. ಇದೇ ಸ್ಥಳದಲ್ಲೇ ಅರ್ಜುನ್ ಮೃತದೇಹವೇನಾದರೂ ಸಿಕ್ಕಬಹುದೇನೋ ಎಂಬ ಆಶಾಭಾವನೆ.

ಇದೀಗ ಗಂಗಾವಳಿ ನದಿ ಪರಿಸರದಲ್ಲಿ ಮಳೆ ವಾತಾವರಣ ಕೊಂಚ ಕಡಿಮೆಯಾಗಿರುವುದರಿಂದ ಹುಡುಕಾಟಕ್ಕೆ ಮುನ್ನಡೆ ಸಿಕ್ಕಬಹುದು ಎಂಬ ಭರವಸೆಯಿದೆ. ನಿನ್ನೆಯ ಹುಡುಕಾಟದಲ್ಲಿ ನದಿ ತಳದಲ್ಲಿ ಸಾಕಷ್ಟು ಕಲ್ಲು ಬಂಡೆಗಳು ಬಿದ್ದಿದೆ ಎಂದು ಈಶ್ವರ ಮಲ್ಪೆ ಹೇಳಿದ್ದಾರೆ. ಹೀಗಾಗಿ ಹುಡುಕಾಟ ನಡೆಸಿದರೂ ಮೃತದೇಹ ಸಿಗುವುದು ಅಷ್ಟು ಸುಲಭವಲ್ಲ. ಅದೂ ಅಲ್ಲದೆ, ಇಷ್ಟು ದಿನ ಕಳೆದಿರುವುದರಿಂದ ಮೃತದೇಹ ಅಲ್ಲೇ ಇರಬಹುದು ಎಂದು ಖಚಿತವಾಗಿ ಹೇಳಲಾಗದು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು: ಇನ್ನೇನೂ ಮದುವೆಗೆ ಎರಡು ದಿನವಿರುವಾಗ ನಾಪತ್ತೆಯಾದ ಹುಡುಗು, ಕೊನೆಗೂ ಪತ್ತೆ

ಅಕ್ರಮವಾಗಿ ಭಾರತಕ್ಕೆ ಬಂದಿದ್ದ 10 ಬಾಂಗ್ಲಾದೇಶಿ ಪ್ರಜೆಗಳಿಗೆ 2 ವರ್ಷ ಜೈಲು

ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು, ನಿರ್ದೇಶಿಸುತ್ತಿದೆ: ರಾಹುಲ್ ಗಾಂಧಿ

ಆರ್ ಅಶೋಕ್ ಎದುರೇ ನಾನೇ ವಿರೋಧ ಪಕ್ಷದ ನಾಯಕನೆಂದ ಬಸನಗೌಡ ಪಾಟೀಲ್ ಯತ್ನಾಳ್

ತಮನ್ನಾ ಭಾಟಿಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments