Webdunia - Bharat's app for daily news and videos

Install App

ನಾಯಕರಿಗೆ ಅಮಿತ್ ಶಾ ಒಗ್ಗಟ್ಟಿನ ಪಾಠ

Webdunia
ಮಂಗಳವಾರ, 31 ಜನವರಿ 2023 (14:03 IST)
ಬೆಳಗಾವಿ : ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಅವರ ನೇತೃತ್ವದಲ್ಲಿ ಬೆಳಗಾವಿ ನಾಯಕರ ಮಹತ್ವದ ಸಭೆ ಶನಿವಾರ ತಡರಾತ್ರಿ ನಡೆದಿದ್ದು, ಹಲವು ಖಡಕ್ ಸೂಚನೆಗಳನ್ನು ನೀಡಲಾಗಿದೆ.
 
ಬೆಳಗಾವಿ ಭಾಗದ ಬಿಜೆಪಿಯೊಳಗಿನ ಸಂಘರ್ಷ, ರಾಜಕೀಯ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಅಮಿತ್ ಶಾ ಫೈನಲ್ ವಾರ್ನಿಂಗ್ ಕೊಟ್ಟಿದ್ದಾರೆ. ಪಕ್ಷದ ವರಿಷ್ಠರ ಅಂತಿಮ ತೀರ್ಪಿನ ಸಂದೇಶವಿದ್ದ ಸಭೆ ಇದಾಗಿತ್ತು. ಬೆಳಗಾವಿ ಬಣ ರಾಜಕಾರಣಕ್ಕೆ ತೆರೆ ಎಳೆಯುವ ನಿರ್ಧಾರದಿಂದಲೇ ಈ ಮಹತ್ವದ ಸಭೆಯನ್ನು ಅಮಿತ್ ಶಾ ನಡೆಸಿದ್ರು.

ನಿನ್ನೆ ರಾತ್ರಿ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ ಅವರು ಸಂಘರ್ಷಕ್ಕೆ ಹೊಲಿಗೆ ಹಾಕುವ ಕಸರತ್ತು ನಡೆಸಿದರು. ಸಭೆಯ ಆರಂಭದಲ್ಲಿ ಅಮಿತ್ ಶಾ ಅವರು, ಬೆಳಗಾವಿ ಬಣ ಬಡಿದಾಟ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.

ನಂತರ ಮಾತು ಶುರು ಮಾಡಿದ ಅಮಿತ್ ಶಾ ಆರಂಭದಲ್ಲಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿದ್ರು. ಪಕ್ಷದ ಬೆಳಗಾವಿ ನಾಯಕರನ್ನು ಹೊಗಳುತ್ತಲೇ ಒಗ್ಗಟ್ಟಿನ ಮಹತ್ವದ ಬಗ್ಗೆ ಪಾಠ ಮಾಡಿದ್ರು. ನಂತರ ಗಂಭೀರವಾದ ಅಮಿತ್ ಶಾ ಬೆಳಗಾವಿ ನಾಯಕರಿಗೆ ಫೈನಲ್ ವಾರ್ನಿಂಗ್ ಕೊಟ್ಟರು ಎನ್ನಲಾಗಿದೆ.  

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments