Select Your Language

Notifications

webdunia
webdunia
webdunia
webdunia

ಸಚಿವ ಸಂಪುಟ ವಿಸ್ತರಣೆ ಭಿನ್ನಾಭಿಪ್ರಾಯ ಬೆನ್ನಲ್ಲೇ ಪಕ್ಷದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದ ಡಿಕೆ ಶಿವಕುಮಾರ್‌

CM DK Shivkumar
ಬೆಂಗಳೂರು: ಪಕ್ಷದ ನಾಯಕತ್ವದೊಂದಿಗೆ ಹಿಂದಿನ ದಿನ ನಡೆಸಿದ ಸಭೆಯ ನಂತರ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ಊಹಾಪೋಹಗಳನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ತಳ್ಳಿಹಾಕಿದರು. 

ಸಚಿವ ಸ್ಥಾನದ ಆಕಾಂಕ್ಷೆಗಳಿದ್ದರೂ, ಎಲ್ಲರೂ ಪಕ್ಷಕ್ಕೆ ಬದ್ಧರಾಗಿದ್ದಾರೆ ಮತ್ತು ನಿಷ್ಠರಾಗಿದ್ದಾರೆ ಹಾಗೂ ಯಾವುದೇ ಸಮಸ್ಯೆಯಿಲ್ಲ ಎಂದು ಅವರು ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಪಕ್ಷದಲ್ಲಿ ಯಾವುದೇ ಸಮಸ್ಯೆಯಿಲ್ಲ ಮತ್ತು ಕೆಲ ಹಿರಿಯ ನಾಯಕರ ಭಾವನೆಗಳನ್ನು ಗೌರವಿಸಬೇಕಾದರೂ, ಪಕ್ಷದ ಬಳಿ ಇರುವುದು ಕೇವಲ 33 ಸ್ಥಾನಗಳು ಮಾತ್ರ ಎಂದು ತಿಳಿಸಿದರು. 

ಯಾವುದೇ ಸಮಸ್ಯೆಯಿಲ್ಲ. ಖಂಡಿತವಾಗಿಯೂ ನಾವು ಕೆಲ ಹಿರಿಯರ ಭಾವನೆಗಳನ್ನು ಗೌರವಿಸಬೇಕು, ಆದರೆ ನಮ್ಮಲ್ಲಿರುವುದು ಕೇವಲ 33 ಸ್ಥಾನಗಳು. ಯಾರ ಆಕಾಂಕ್ಷೆಯನ್ನೂ ನಾನು ಅಲ್ಲಗಳೆಯುವುದಿಲ್ಲ. ನಾವೆಲ್ಲರೂ ಪಕ್ಷಕ್ಕೆ ಬದ್ಧರಾಗಿದ್ದೇವೆ ಮತ್ತು ನಿಷ್ಠರಾಗಿದ್ದೇವೆ," ಎಂದು ಅವರು ಹೇಳಿದರು. 

ಇತ್ತೀಚಿನ ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯ ವಿಷಯದಲ್ಲಿ ಕರ್ನಾಟಕ ಘಟಕದಲ್ಲಿ ಅಸಮಾಧಾನದ ನಡುವೆಯೇ, ಕಾಂಗ್ರೆಸ್ ನಾಯಕತ್ವವನ್ನು ಭೇಟಿಯಾದ ಮರುದಿನವೇ ಅವರು ಈ ಹೇಳಿಕೆ ನೀಡಿದ್ದಾರೆ. 

ವಿಸ್ತರಿತ ಸಂಪುಟದಲ್ಲಿ ಸ್ಥಾನ ಪಡೆಯದ ಕೆಲವು ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಉಂಟಾದ ಅಸಮಾಧಾನದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ನನ್ನನ್ನು ತಡೆಯಲು ಕೇಂದ್ರವು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿದೆ: ರಾಹುಲ್ ಗಾಂಧಿ