Webdunia - Bharat's app for daily news and videos

Install App

ಪರಿಶಿಷ್ಟರ ಹಣವನ್ನು ಅವರ ಯೋಜನೆಗೇ ಮೀಸಲಿಡಿ: ಕಾರಜೋಳ

Webdunia
ಮಂಗಳವಾರ, 1 ಆಗಸ್ಟ್ 2023 (17:51 IST)
ದಲಿತರ ಕಲ್ಯಾಣಕ್ಕಾಗಿ ಮೀಸಲಿಡುವ ಎಸ್ ಸಿ ಪಿಟಿಎಸ್ ಪಿ ಯೋಜನೆಗೆ ಮೀಸಲಿಟ್ಟಿರುವ ಅನುದಾನದ ಹಂಚಿಕೆ ವಿಚಾರ ಆಡಳಿತ  ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಡುವೆ ಟಾಕ್ ವಾರ್ ಗೆ ಎಡೆ ಮಾಡಿಕೊಟ್ಟಿದೆ. ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿಟಿಎಸ್ ಪಿ ಯೋಜನೆಗಳ ಹಣ ಬಳಕೆ ಮಾಡುವುದನ್ನು ಬಿಜೆಪಿ ವಿರೋಧಿಸಿದ್ರೆ, ಕಾಂಗ್ರೆಸ್ ಯೋಜನೆ ದುರ್ಬಳಕೆ ಆಗಿಲ್ಲ ಎಂದು ಹೇಳಿಕೊಂಡಿದೆ.

 ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಅನುದಾನಕ್ಕಾಗಿ ದಲಿತರ ಕಲ್ಯಾಣಕ್ಕಾಗಿ ಮೀಸಲಿರಿಸಿದ್ದ ಎಸ್ ಸಿಪಿಟಿಎಸ್ ಪಿ ಯೋಜನೆಯ 11,ಸಾವಿರಕೋಟಿ ರೂಪಾಯಿಗಳ ಹಣವನ್ನು ರಾಜ್ಯ ಸರ್ಕಾರ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷ ಬಿಜೆಪಿ  ಬಲವಾಗಿ ಖಂಡಿಸಿದೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಸಿದ್ದರಾಮಯ್ಯ ಸರ್ಕಾರದ ದಲಿತ ವಿರೋಧಿ ನಿಲುವನ್ನು ಮಾಜಿ ಉಪಮುಖ್ಯ ಗೋವಿಂದ ಕಾರಜೋಳ ವಿರೋಧಿಸಿ, ಸಮರ್ಪಕ ಬಳಕೆಗೆ ಒತ್ತಾಯಿಸಿದ್ರು.

ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಗೋವಿಂದ ಕಾರಜೋಳ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡ್ತಿದೆ. ಹಾಸ್ಟೆಲ್, ವಸತಿ ಶಾಲೆಗಳಿಗೆ ಈ ಯೋಜನೆಯಡಿ ಸರ್ಕಾರ ಹಣ ಇಟ್ಟಿಲ್ಲ. ಬಹಳಷ್ಟು ಕಡೆ ವಸತಿ ಶಾಲೆಗಳು, ಹಾಸ್ಟೆಲ್‌ಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಇವುಗಳಿಗೆ ಹಣ ಕೊಡುವುದನ್ನು ಬಿಟ್ಟು ಗ್ಯಾರಂಟಿಗಳಿಗೆ ಹಣ ಮೀಸಲಿಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ರು.   ಸರ್ಕಾರದ ಈ  ಕ್ರಮ ಸರಿ ಇಲ್ಲ. ಕಾಮನ್ ಪ್ರೋಗ್ರಾಂ ಆಗಿ ಘೋಷಿಸಿರುವ ಯೋಜನೆಗಳಿಗೆ ದಲಿತರ ಮೀಸಲು ಹಣ ಬಳಕೆ ಸಮರ್ಪಕವಲ್ಲ ಎಂದು ಕಾರಜೋಳ ಹೇಳಿದ್ರು. ಇದೇ ವೇಳೆ ಸಚಿವ ಎಚ್ ಸಿ ಮಹಾದೇವಪ್ಪ ಅವರನ್ನು ಆಗ್ರಹಿಸಿದ ಕಾರಜೋಳ, ಹೋರಾಟಗಾರರಾದ ತಾವು ಸಿಎಂ ಒತ್ತಾಯಕ್ಕೆ ಮಣಿದು ಎಸ್ಸಿ, ಎಸ್ಟಿ ಹಣ ಬೇರೆ ಉದ್ದೇಶಕ್ಕೆ ಬಳಸೋದನ್ನು ಒಪ್ಪಿಕೊಳ್ಳಬಾರದು ಎಂದ್ರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉತ್ತರಕಾಶಿ ಮೇಘಸ್ಫೋಟ, ವಯನಾಡು ದುರಂತವನ್ನು ನೆನಪಿಸುವಂತಿಗೆ ಭಯಾನಕ ವಿಡಿಯೋ

ಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಇನ್ನಿಲ್ಲ, ಅವರ ರಾಜಕೀಯ ಹಾದಿ ಇಲ್ಲಿದೆ

ಧರ್ಮಸ್ಥಳ ಹಲವಾರು ಶವಗಳನ್ನು ಹೂತಿಟ್ಟ ಪ್ರಕರಣ: ಕಾಡಿನಲ್ಲಿ 7ನೇ ದಿನ ಹೇಗೇ ನಡೆಯುತ್ತಿದೆ ಕಾರ್ಯಚರಣೆ

ಸಾರಿಗೆ ನೌಕರರ ಮುಷ್ಕರ ತಕ್ಷಣ ಪರಿಹರಿಸಿ: ಡಾ.ಸಿ.ಎನ್.ಅಶ್ವತ್ಥನಾರಾಯಣ್

ನಮ್ಮ ಪರಿಸ್ಥಿತಿನೂ ಸ್ವಲ್ಪ ಅರ್ಥ ಮಾಡ್ಕೊಳ್ರಪ್ಪಾ: ಸಾರಿಗೆ ನೌಕರರಿಗೆ ಡಿಕೆ ಶಿವಕುಮಾರ್ ರಿಕ್ವೆಸ್ಟ್

ಮುಂದಿನ ಸುದ್ದಿ
Show comments