Select Your Language

Notifications

webdunia
webdunia
webdunia
webdunia

ಅಖಂಡ ಶ್ರೀನಿವಾಸ್​ಗೆ ‘ಕೈ’ ತಪ್ಪುತ್ತಾ ಟಿಕೆಟ್?

ಅಖಂಡ ಶ್ರೀನಿವಾಸ್​ಗೆ ‘ಕೈ’ ತಪ್ಪುತ್ತಾ ಟಿಕೆಟ್?
bangalore , ಶುಕ್ರವಾರ, 17 ಮಾರ್ಚ್ 2023 (21:15 IST)
ಬೆಂಗಳೂರಿನ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ಕೈತಪ್ಪುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ. ಅಖಂಡಗೆ ಟಿಕೆಟ್ ಕೊಡಲು ಕಾಂಗ್ರೆಸ್‌ ಒಂದು ಬಣ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ, ಮತ್ತೊಂದು ಬಣ ಬೆಂಬಲವಾಗಿ ನಿಂತಿದೆ. ಈ ನಡುವೆ ಪುಲಕೇಶಿ ನಗರಕ್ಕೆ ಮಾಜಿ DCM ಡಾ. G. ಪರಮೇಶ್ವರ್, ಡಾ. H.C. ಮಹದೇವಪ್ಪ ಹೆಸರುಗಳು ಕೂಡಾ ಕೇಳಿಬರುತ್ತಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿವೆ. ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗಲಭೆ ನಡೆದಿತ್ತು. ಪೊಲೀಸ್ ಠಾಣೆಗೂ ಬೆಂಕಿ ಹಚ್ಚಲಾಗಿದ್ದು, ನಂತರದಲ್ಲಿ ನಡೆದ ಪೊಲೀಸ್ ಗೊಲಿಬಾರ್‌ಗೆ ಮೂವರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಕಾಂಗ್ರೆಸ್ ಮಾಜಿ ಮೇಯರ್ ಸಂಪತ್ ರಾಜ್ ಬಂಧನವೂ ಆಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

‘ಕಾಂಗ್ರೆಸ್​​ SDPI ಬೆಂಬಲ ಕೇಳಿತ್ತು