Select Your Language

Notifications

webdunia
webdunia
webdunia
webdunia

ಭಾರತೀಯ ಸೇನೆ ವಿರುದ್ಧ ಘೋಷಣೆ: ಸಾಕ್ಷ್ಯ ದೊರೆತಲ್ಲಿ ಆರೋಪಿಗಳ ಬಂಧನ ಎಂದ ಡಿಜಿಪಿ

ಕನ್ನಡ ಪ್ರಾದೇಶಿಕ
ಹುಬ್ಬಳ್ಳಿ , ಗುರುವಾರ, 18 ಆಗಸ್ಟ್ 2016 (17:48 IST)
ಬೆಂಗಳೂರಿನಲ್ಲಿ ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಪ್ರತಿದೂರು ದಾಖಲಾಗಿದೆ. ಘಟನೆಯ ವಿಡಿಯೋ ಸಿಕ್ಕ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಜಿ ಹಾಗೂ ಐಜಿಪಿ ಓಂ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
 
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಹೇಳನಕಾರಿ ಘೋಷಣೆ ಕೂಗಿದವರ ಕುರಿತು ಯಾವುದೇ ಸ್ಪಷ್ಟ ದಾಖಲೆಗಳಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಬೇಕು ತಿಳಿಯುತ್ತಿಲ್ಲ. ಖಚಿತವಾದ ಸಾಕ್ಷಿಗಳು ಲಭ್ಯವಾದ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
 
ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರಿಂದ ಕೇಂದ್ರ ಗೃಹ ಇಲಾಖೆಗೆ ದೂರು ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶೆಣೈ ಅವರ ಮನಸ್ಥಿತಿ ನಮಗೆ ತಿಳಿಯದು ಎಂದು ತಿಳಿಸಿದ್ದಾರೆ.
 
ಕರ್ತವ್ಯಕ್ಕೆ ಸಂಬಂಧಿಸಿದಂತೆ ನೈತಿಕತೆ ಕುಂದಿಸಿದ ರಾಜ್ಯ ಸರಕಾರ, ಮಾಜಿ ಸಚಿವ ಪರಮೇಶ್ವರ್ ನಾಯ್ಕ, ಡಿಜಿಪಿ ಓಂ ಪ್ರಕಾಶ್ ಹಾಗೂ ಬಳ್ಳಾರಿ ಐಜಿಪಿ ಮುರುಗನ್ ವಿರುದ್ಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಅನುಪಮಾ ಶೆಣೈ ದೂರು ಸಲ್ಲಿಸಿದ್ದರು.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಲಾಯಂ ಅಖಿಲೇಶ್‌ರನ್ನು ಟೀಕಿಸುತ್ತಾರೆ ರಾಜೀನಾಮೆ ಪಡೆಯಲ್ಲ: ಬಿಜೆಪಿ ವ್ಯಂಗ್ಯ