Publish Date: Fri, 03 Mar 2017 (20:40 IST)
Updated Date: Fri, 03 Mar 2017 (20:45 IST)
ಅಪಘಾತದಲ್ಲಿ ವ್ಯಕ್ತಿಯೊಬ್ಬ ಕಾಲು ಕಳೆದುಕೊಂಡು ಒದ್ದಾಡುತ್ತಿದ್ದರೂ ಸುತ್ತಮುತ್ತಲಿದ್ದ ಜನ ನೆರವಿಗೆ ಬಾರದೆ ವಿಡಿಯೋ ಮಾಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ 22ರಂದೇ ಚಿತ್ರದುರ್ಗದಲ್ಲಿ ಇತ್ತದ್ದೊಂದು ಘಟನೆ ನಡೆದಿದೆ.
ಮೊಳಕಾಲ್ಮೂರಿನ ಸಿದ್ಧಾಪುರ ಗ್ರಾಮದ ಬಳಿ ಆಟೋ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ರಮೇಶ್ ಸುತ್ತಲೂ ಓಡಾಡುತ್ತಿದ್ದ ಜನರನ್ನ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದರೆ, ಯಾರೂ ನೆರವಿಗೆ ಬಂದಿಲ್ಲ.
ಮೊಬೈಲ್`ಗಳಲ್ಲಿ ದೃಶ್ಯ ಹರಿದಾಡುತ್ತಿದ್ದು, ಜನ ಮಾನವೀಯತೆಯನ್ನೇ ಮರೆತು ವರ್ತಿಸಿರುವುದು ನಾಗರೀಕ ಸಮಾಜವನ್ನ ತಲೆತಗ್ಗಿಸುವಂತೆ ಮಾಡಿದೆ.