Select Your Language

Notifications

webdunia
webdunia
webdunia
webdunia

ನಟ ದರ್ಶನ್‌ಗೂ ತಾಗಿತು ಒತ್ತುವರಿ ತೆರವು ಬಿಸಿ: ಎರಡು ದಿನಗಳ ನಂತರ ಕ್ರಮ ಎಂದ ಬಿಬಿಎಂಪಿ

ಕನ್ನಡ ಪ್ರಾದೇಶಿಕ
ಬೆಂಗಳೂರು , ಗುರುವಾರ, 18 ಆಗಸ್ಟ್ 2016 (17:39 IST)
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ನಟ ದರ್ಶನ್ ಅವರಿಗೂ ಒತ್ತುವರಿ ಕಾರ್ಯಾಚರಣೆ ಬಿಸಿ ತಟ್ಟುವ ಸಾಧ್ಯತೆ ಇದೆ.
 
ಬೆಂಗಳೂರಿನ ರಾಜರಾಜೇಶ್ವರಿನಗರ ಬಳಿ ರಂಗೋಲಿಹಳ್ಳ ಒತ್ತುವರಿಯಾಗಿದ್ದು, ಈ ಹಳ್ಳದ ವ್ಯಾಪ್ತಿಯ ಹಲಗವಡೇರಹಳ್ಳಿಯ ಸರ್ವೆ ನಂಬರ್ 55 ರಲ್ಲಿ ನಟ ದರ್ಶನ್ ಮನೆ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
 
ಸುಮಾರು 199 ಅಡಿ ಒತ್ತುವರಿಯಾದ ಹಳ್ಳದಲ್ಲಿ ನಟ ದರ್ಶನ್ ಮನೆ ನಿರ್ಮಿಸಿದ್ದಾರೆ ಎಂದು ಕಂದಾಯ ಇಲಾಖೆಯ ಸೂಪರ್ ಇಂಪೋಸ್ ಮ್ಯಾಪ್‌‌ನಲ್ಲಿ ದಾಖಲಾಗಿದೆ.
 
ಈ ಲೇಔಟ್‌ನಲ್ಲಿ ನಟ ದರ್ಶನ್ ನಿವೇಶನ ಖರೀದಿಸಿ ಮನೆ ನಿರ್ಮಿಸಿದ್ದಾರೆ. ಹೀಗಾಗಿ ಅವರಿಗೂ ರಾಜಕಾಲುವೆ ಒತ್ತುವರಿ ಬಿಸಿ ತಟ್ಟುವ ಸಾಧ್ಯತೆ ಇದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ