Select Your Language

Notifications

webdunia
webdunia
webdunia
webdunia

ಕಾವೇರಿ: ಕಪ್ಪುಪಟ್ಟಿ ಧರಿಸಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ

ಕಾವೇರಿ: ಕಪ್ಪುಪಟ್ಟಿ ಧರಿಸಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ
ಚಾಮರಾಜನಗರ , ಮಂಗಳವಾರ, 3 ಜುಲೈ 2018 (16:24 IST)
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ 31 ಟಿಎಂಸಿ ನೀರು ಬಿಡುವಂತೆ ಸೂಚಿಸಿರುವುದನ್ನ ಖಂಡಿಸಿ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು.
 
 
ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಭುವನೇಶ್ವರಿ ವೃತ್ತದ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ರಸ್ತೆ ತಡೆ ನಡೆಸಿದರು.
 
ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾಕಾರರು, ಪ್ರಾಧಿಕಾರದ ಮೊದಲ ಸಭೆಯಲ್ಲೇ ಅಣೆಕಟ್ಟು ನಿರ್ವಹಣೆ ವಿಚಾರ ಪ್ರಸ್ತಾಪವಾಗಿದ್ದನ್ನ ಕಠಿಣ ಶಬ್ದಗಳಲ್ಲಿ ಖಂಡಿಸಿದರು.
 
ಈ ವೇಳೆ ಮಾತನಾಡಿದ ಕನ್ನಡ ಹೋರಾಟಗಾರ ಚಾರಂ ಶ್ರೀನಿವಾಸಗೌಡ, ರಾಜ್ಯದ ಜಲಾಶಯಗಳು ನಮ್ಮ ಕೈಯಲಿಲ್ಲ, ಜಲಾಶಯಕ್ಕೆ ಹೋಗಲು ನ್ಯಾಯಾಧಿಕರಣದ ಅನುಮತಿ ಪಡೆಯಬೇಕು, ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾಡಿದ ಘೋರ ಅಪಮಾನ ಎಂದು ಕಿಡಿ ಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಂಕಷ್ಟದಲ್ಲಿರುವ ರಾಜ್ಯದ ಪ್ರವಾಸಿಗರಿಗೆ ಅಗತ್ಯ ನೆರವು: ಸಂಸದ ಪ್ರಲ್ಹಾದ ಜೋಶಿ