ಪರೀಕ್ಷೆಗೆ ಗೈರು : ಹಿಜಬ್ಗೆ ಆಗ್ರಹಿಸಿ ಪ್ರತಿಭಟನೆ

Webdunia
ಭಾನುವಾರ, 6 ಮಾರ್ಚ್ 2022 (12:10 IST)
ಚಿಕ್ಕಮಗಳೂರು : ನಮಗೆ ಪರೀಕ್ಷೆ-ಹಿಜಬ್ ಎರಡೂ ಬೇಕು ಎಂದು ಹಿಜಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿನ ಗೇಟ್ ಮುಂದೆಯೇ ಪ್ರತಿಭಟನೆ ನಡೆಸಿದ ಘಟನೆ ನಗರದ ಐಡಿಎಸ್ಜಿ ಕಾಲೇಜಿನಲ್ಲಿ ನಡೆದಿದೆ.
 
ನಗರದ ಐಡಿಎಸ್ಜಿ ಪದವಿ ಕಾಲೇಜಿಗೆ ಇಂದು ಸುಮಾರು 25ಕ್ಕೂ ಹೆಚ್ಚು ವಿಧ್ಯಾರ್ಥಿನಿಯರು ಹಿಜಬ್ ಧರಿಸಿ ಬಂದಿದ್ದರು. ಈ ವೇಳೆ ಕಾಲೇಜು ಆಡಳಿತ ಮಂಡಳಿ ಹಿಜಬ್ ಧರಿಸಿ ಬಂದರೆ ಕಾಲೇಜಿಗೆ ಪ್ರವೇಶವಿಲ್ಲ ಎಂದು ಗೇಟ್ ಮುಚ್ಚಿದ್ದರು. ಹೀಗಾಗಿ ವಿದ್ಯಾರ್ಥಿನಿಯರು ಕಾಲೇಜಿನ ಗೇಟ್ ಮುಂಭಾಗವೇ ಧರಣಿ ನಡೆಸಿದರು.

ಗೇಟ್ ಬಳಿ ಧರಣಿಗೆ ಕೂತ ವಿಧ್ಯಾರ್ಥಿನಿಯರು ಸುಡು ಬಿಸಿಲಲ್ಲೇ ಪುಸ್ತಕ ತೆಗೆದು ಓದಲು ಮುಂದಾದರು. ಪ್ರಸ್ತುತ ಕಾಲೇಜಿನಲ್ಲಿ ಇಂಟರ್ನಲ್ ಪರೀಕ್ಷೆ ನಡೆಯುತ್ತಿದೆ. ವಿದ್ಯಾರ್ಥಿನಿಯರು ನಮಗೆ ಪರೀಕ್ಷೆ ಹಾಗೂ ಹಿಜಬ್ ಎರಡೂ ಮುಖ್ಯ ಎಂದು ಪ್ರತಿಭಟನೆ ನಡೆಸಿದರು. 

ಕಾಲೇಜು ಆಡಳಿತ ಮಂಡಳಿ ಗೇಟ್ ಮುಚ್ಚುತ್ತಿದ್ದಂತೆ ವಿದ್ಯಾರ್ಥಿನಿಯರು ನಮಗೆ ಕ್ಯಾಂಪಸ್ಗೆ ಪ್ರವೇಶಿಸಲು ಅವಕಾಶ ನೀಡಿ ಎಂದು ಆಗ್ರಹಿಸಿದರು. ಈ ವೇಳೆ ವಿದ್ಯಾರ್ಥಿನಿಯರು ಹಾಗೂ ಆಡಳಿತ ಮಂಡಳಿಯ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ಆದರೆ ಆಡಳಿತ ಮಂಡಳಿ ಸಾಕಷ್ಟು ವಿದ್ಯಾರ್ಥಿನಿಯರು ಹಿಜಬ್ ತೆಗೆದು ಪರೀಕ್ಷೆ ಬರೆಯುತ್ತಿದ್ದಾರೆ. ತರಗತಿಗಳಲ್ಲಿ ಕೂತಿದ್ದಾರೆ. ನೀವು ಹಿಜಬ್ ತೆಗೆದು ಬನ್ನಿ ಎಂದು ಸೂಚಿಸಿದರು. ಅದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಬಿಸಿಲಲ್ಲೇ ಪ್ರತಿಭಟನೆ ನಡೆಸಿದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಮಹತ್ವದ ಫೋಸ್ಟ್ ಹಂಚಿಕೊಂಡ ರಾಜನಾಥ್ ಸಿಂಗ್

ಧರ್ಮೇಂದ್ರಾ ಪ್ರಧಾನ್ ರಾಜೀನಾಮೆ ನೀಡುತ್ತಿದ್ದ ಹಾಗೇ ಮಹತ್ವದ ನಿರ್ಧಾರ ಕೈಗೊಂಡ ಸಿಜೆ ಚಳುವಳಿಯು ತನ್ನ ಪ್ರತಿಭಟನೆಯನ್ನು ಕೊನೆಗೊಳಿಸಿದೆ

ಧರ್ಮೇಂದ್ರ ಪ್ರಧಾನ್ ಅವರ ಸ್ಥಾನಕ್ಕೆ ಇದೀಗ ಹರಿದಾಡುತ್ತಿರುವ ಹೆಸರುಗಳು ಇಲ್ಲಿದೆ

ಈ ಸರ್ಕಾರವನ್ನು ಕಿತ್ತೊಗೆಯುವ ಸಮಯ ಬಂದಿದೆ: ರಾಹುಲ್ ಗಾಂಧಿ ಕಿಡಿ

ಅವನ ಮೇಲೆ ಹಲ್ಲೆ ನಡೆದಾಗ ನನಗೆ ಭಯವಾಗುತ್ತಿತ್ತು: ಅಭಿಜೀತ್ ದಿಪ್ಕೆ ತಾಯಿ ಮೊದಲ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments