Webdunia - Bharat's app for daily news and videos

Install App

ಲಕ್ಕಸಂದ್ರದಲ್ಲಿ ಶಿಥಿಲಗೊಂಡ ಸ್ಥಿತಿಯಲ್ಲಿದ್ದ ಮೂರು ಅಂತಸ್ತಿನ ಕಟ್ಟಡ

Webdunia
ಸೋಮವಾರ, 27 ಸೆಪ್ಟಂಬರ್ 2021 (22:12 IST)
ಬೆಂಗಳೂರು: ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕಸಂದ್ರದಲ್ಲಿ ಶಿಥಿಲಗೊಂಡ ಸ್ಥಿತಿಯಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಸೋಮವಾರ ಬೆಳಗ್ಗೆ ಕುಸಿದಿದೆ. ಕುಸಿತ ಪ್ರಕರಣ ಸಂಬಂಧ ಕಟ್ಟಡ ಮಾಲೀಕನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮಾಲೀಕ ಸುರೇಶ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ, ಆತನ ಪತ್ತೆಗೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
1974ರಲ್ಲಿ‌ ನಿರ್ಮಾಣಗೊಂಡಿದ್ದ ಹಳೆ ಹಾಗೂ ಮಣ್ಣಿನಿಂದ ಕೂಡಿದ ಮನೆ ಇದಾಗಿತ್ತು. ನಂಜಪ್ಪ ಎಂಬುವರು ಮನೆ ಕಟ್ಟಿದ್ದು ಎಂಬುದು ತಿಳಿದು ಬಂದಿದೆ. ಮಗ ಸುರೇಶ್ ಉಸ್ತುವಾರಿ ವಹಿಸಿಕೊಂಡಿದ್ದ. ಮೂರು ಅಂತಸ್ತಿ‌ನ ಮನೆಯಲ್ಲಿ ಒಟ್ಟು ಎಂಟು ಮನೆಗಳಿವೆ. ಬಹುತೇಕ ಮೆಟ್ರೋ ಕಾರ್ಮಿಕರೇ ವಾಸವಾಗಿದ್ದರು.
ಲಕ್ಕಸಂದ್ರ ಬಳಿ ಮೆಟ್ರೋ ಕಾಮಗಾರಿ ಹಿನ್ನೆಲೆ ಕಳೆದ ಎರಡು ವರ್ಷಗಳ ಹಿಂದೆ ಮನೆಯೊಳಗೆ ಕಟ್ಟಡದಲ್ಲಿ ಬಿರುಕು ಮೂಡಿತ್ತು. ಇಷ್ಟಾದರೂ ಮಾಲೀಕ ಸುರೇಶ್ ಎಚ್ಚೆತ್ತಿರಲಿಲ್ಲ.‌ ಶಿಥಿಲಗೊಂಡಿದ್ದ ಮನೆಯೊಳಗಡೆ ಭಾನುವಾರ ರಾತ್ರಿ ಕಟ್ಟಡದಲ್ಲಿ ಬಿರುಕುಗೊಂಡಿತ್ತು. ಒಂದೆರಡು ಇಟ್ಟಿಗೆಗಳು ಉರುಳಿಬಿದ್ದಿದ್ದವು. ಕೂಡಲೇ ಆತಂಕಗೊಂಡ ನಿವಾಸಿಗಳು ಪಾತ್ರೆ-ಸಾಮಾನು ಸಮೇತ ಮನೆ ತೆರವುಗೊಳಿಸಿದ್ದರು.‌
ಸೋಮವಾರ ಬೆಳಗ್ಗೆ ಮನೆಯೊಳಗಡೆ ಮತ್ತಷ್ಟು ಬಿರುಕು ಕಾಣುವುದನ್ನ ಕಂಡು ಮನೆಯೊಳಗಿನಿಂದ ಎಲ್ಲರೂ ಹೊರ ಬಂದಿದ್ದಾರೆ. ಬೆಳಗ್ಗೆ 11.30ರ ವೇಳೆ ಕಟ್ಟಡ ನೆಲಕ್ಕೆ ಕುಸಿದಿದೆ. ಸದ್ಯ ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆಡುಗೋಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಆಗಿ ಸಿದ್ದರಾಮಯ್ಯ 5 ವರ್ಷ ಪೂರ್ಣಗೊಳಿಸುತ್ತಾರೆ: ಡಾ.ಯತೀಂದ್ರ

ಭಾರೀ ಮಳೆಯ ಮುನ್ಸೂಚನೆ: 24ಗಂಟೆಗಳ ಕಾಲ ಚಾರ್‌ ಧಮ್ ಯಾತ್ರೆ ಸ್ಥಗಿತ

ಪ್ರತಿ ವರ್ಷವೂ ಯೋಗ ದಿನ ಅಂದುಕೊಂಡದಕ್ಕಿಂತ ವಿಶೇಷವಾಗಿರುತ್ತದೆ: ಪ್ರಧಾನಿ ಮೋದಿ ಮೆಚ್ಚುಗೆ

ವಿಷಪ್ರಾಶನದಿಂದ ಐದು ಹುಲಿಗಳು ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿದ್ದರಾಮಯ್ಯ

ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಮೂರು ಮಂದಿ ಸಾವು, ಹಲವರಿಗೆ ಗಾಯ

ಮುಂದಿನ ಸುದ್ದಿ
Show comments