Select Your Language

Notifications

webdunia
webdunia
webdunia
webdunia

ಮಗಳನ್ನು ಪ್ರೀತಿಸುತ್ತಿದ್ದವನಿಗೆ ಸುಪಾರಿ ಇಟ್ಟ ತಾಯಿ

ಮಗಳನ್ನು ಪ್ರೀತಿಸುತ್ತಿದ್ದವನಿಗೆ ಸುಪಾರಿ ಇಟ್ಟ ತಾಯಿ
ಶಿವಮೊಗ್ಗ , ಸೋಮವಾರ, 22 ಜನವರಿ 2018 (09:10 IST)

ಮಗಳ ಮೇಲೆ ಕಣ್ಣು ಹಾಕಿದವನನ್ನು ಹಲ್ಲೆ ಮಾಡಲು ಪುಡಿ ರೌಡಿಗಳಿಗೆ ತಾಯಿಯೇ ಸುಪಾರಿ ಕೊಟ್ಟಿರುವ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಗೋವಿಂದಪುರ ಗ್ರಾಮದ ಧನಲಕ್ಷ್ಮೀ ಎಂಬುವ ಮಹಿಳೆಯೇ ತನ್ನ ಮಗಳ ಮೇಲೆ ಕಣ್ಣು ಹಾಕಿದ್ದ ನಿತಿನ್ ಮೇಲೆ ಹಲ್ಲೆ ನಡೆಸಲು ಸುಪಾರಿ ನೀಡಿದ್ದಾಳೆ. ಸುಪಾರಿ ಪಡೆದ ರೌಡಿ ಸಂತು ಸಹಚರರು ಸೇರಿಕೊಂಡು ಚೂರಿಯಿಂದ ನಿತಿನ್ ಹಾಗೂ ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾನೆ.

ನಿತಿನ್ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ನೇಹಿತರಾದ ರಾಜು, ಪ್ರಜ್ವಲ್, ನವೀನ್ ಕೂಡ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿತಿನ್ ಹಾಗೂ ಸುಪಾರಿ ನೀಡಿದ ಮಹಿಳೆಯ ಮಗಳು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಹುಡುಗಿಯ ಕಡೆಯವರು ನಿತಿನ್ ಹುಡುಗಿಗೆ ಕಾಟ ಕೊಡುತ್ತಿದ್ದ ಎಂದು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ- ಕುಮಾರಸ್ವಾಮಿ