Webdunia - Bharat's app for daily news and videos

Install App

ಕಿರಿಕ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಜನನಿಬಿಡ ಪ್ರದೇಶದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ

Webdunia
ಮಂಗಳವಾರ, 28 ಫೆಬ್ರವರಿ 2023 (16:53 IST)
ಪ್ರತಿದಿನ ಕುಡಿದು ಬಂದು ಹೆಂಡತಿ ಜೊತೆ ಕಿರಿಕ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಜನನಿಬಿಡ ಪ್ರದೇಶದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌. 
 
ಚನ್ನಪಟ್ಟಣ ಮೂಲದ ಮಾದೇವ ಮೃತ ವ್ಯಕ್ತಿ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಸ್ಥಳೀಯರು ಶವ ನೋಡಿ ಬೆಚ್ಚಿಬಿದ್ದು ಪೊಲೀಸರಿಗೆ ಮಾಹಿತಿ‌ ನೀಡಿದ್ದರು. ಮೃತ ಮಾದೇವ ಪ್ರತಿದಿನ ಕುಡಿದು ಹೆಂಡತಿ ಜೊತೆ ಜಗಳವಾಡಿ ಹಿಂಸೆ ನೀಡುತ್ತಿದ್ದ. ಈತನ ವರ್ತನೆಯಿಂದ ನೊಂದಿದ್ದ ಪತ್ನಿ ಅನೇಕ ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಪೊಲೀಸರು ಹೆಂಡತಿ ಜೊತೆ ಕಿರಿಕ್ ಮಾಡಬೇಡ ಎಂದು ವಾರ್ನ್ ಮಾಡಿ ಕಳುಹಿಸಿದ್ದರು. ಈಗಾಗಲೇ ಮೂರು ಮದುವೆಯಾಗಿದ್ದ ಮಾದೇವ ಬುದ್ದಿ ಕಲಿಯದೆ,ನಿನ್ನೆ ಬೆಳಗ್ಗೆ ಹೆಂಡತಿ ಜೊತೆ ಜಗಳವಾಡಿ 150 ರೂಪಾಯಿ ಪಡೆದು ಕಂಠಪೂರ್ತಿ ಕುಡಿದು ಬಂದು ಮತ್ತೆ ಗಲಾಟೆ ಶುರುಮಾಡಿದ್ದ. ಈ ವಿಷಯವನ್ನು ಮಾದೇವನ ಪತ್ನಿ ಪೊಲೀಸರಿಗೆ ತಿಳಿಸಿದ್ದಳು. ಸ್ಥಳಕ್ಕೆ ಬಂದ ಪೊಲೀಸರು ಮನೆಗೆ ಬಂದು ಬುದ್ದಿ ಹೇಳಿದ್ದರಿಂದ ಮನನೊಂದ ಮಾದೇವ ಪಾಪರೆಡ್ಡಿಪಾಳ್ಯ ಸರ್ಕಲ್ ಬಳಿ ಬಂದು ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ‌. ಸದ್ಯ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Chinnaswamy Stampede: ಸ್ಥಳದಲ್ಲಿದ್ದವರು ಪ್ರಾಣ ಉಳಿಸಲು ಯತ್ನಿಸಿದರು: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣವೇನು video

Animal Attack: MPಯ ಬರ್ವಾನಿಯಲ್ಲಿ 6ಮಂದಿ ಸಾವು, ಹಲವರಿಗೆ ಗಾಯ

Pakistan: ಗನ್‌ ಜತೆ 200 ಕೈದಿಗಳು ಪರಾರಿ, ಜೈಲಿನಲ್ಲೇ ಹೀಗಾದ್ರೇ ಇನ್ನೇನ್ ಕತೆ

RCB Victory Parade: ಕಾಲ್ತುಳಿತದಲ್ಲಿ ಮೂವರು ಫ್ಯಾನ್ಸ್ ಸಾವು, ಹಲವು ಮಂದಿಗೆ ಗಾಯ

Terror Threat: ದಿಢೀರನೇ ಆಪರೇಷನ್ ಶಿವ ಆರಂಭಿಸಿ ಭದ್ರತಾ ಪಡೆ, ಕಾರಣ ಇಲ್ಲಿದೆ

ಮುಂದಿನ ಸುದ್ದಿ
Show comments