Select Your Language

Notifications

webdunia
webdunia
webdunia
webdunia

ಅಗಲಿದ ಹಿರಿಯ ಚೇತನ – ಸಾಹಿತ್ಯ ಲೋಕಕ್ಕೆ ಶಾಕ್

ಅಗಲಿದ ಹಿರಿಯ ಚೇತನ – ಸಾಹಿತ್ಯ ಲೋಕಕ್ಕೆ ಶಾಕ್
ಬೆಂಗಳೂರು , ಶುಕ್ರವಾರ, 20 ಡಿಸೆಂಬರ್ 2019 (17:40 IST)
ಕನ್ನಡ ಸಾಹಿತ್ಯ ಲೋಕದ ಹಿರಿಯ ಜೀವವೊಂದು ಅಗಲಿದೆ. ದಿಗ್ಗಜ ಸಾಹಿತಿ ಇನ್ನಿಲ್ಲವಾಗಿರೋದು ಸಾಹಿತ್ಯ ವಲಯಕ್ಕೆ ಶಾಕ್ ನೀಡಿದಂತಾಗಿದೆ.

ಹಿರಿಯ ಸಾಹಿತಿ, ಲೇಖಕ ಪ್ರೊ.ಎಲ್.ಎಸ್.ಶೇಷಗಿರಿರಾವ್ ನಿಧನರಾಗಿದ್ದಾರೆ. ಅವರಿಗೆ 95 ವರ್ಷಗಳಾಗಿದ್ದವು.

ಎಲ್ಲೆಸ್ಸೆಸ್ ಎಂದೇ ಕರೆಯಲ್ಪಡುತ್ತಿದ್ದ ಪ್ರೊ.ಎಲ್.ಎಸ್.ಶೇಷಗಿರಿರಾವ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.

ಬೆಂಗಳೂರು ವಿವಿಯ ಇಂಗ್ಲಿಷ್ ವಿಭಾಗದಲ್ಲಿ ಕಾರ್ಯನಿರ್ವಹಣೆ ಮಾಡಿದ್ದರು. ಅಷ್ಟೇ ಅಲ್ಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳು ಇವರಿಗೆ ಸಂದಿದ್ದವು. 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ನಲ್ಲೇ ಬಟ್ಟೆ ಬಿಚ್ಚಿ ಸಂಭೋಗ ಮಾಡಿದ ಜೋಡಿ – ವಿಡಿಯೋ ವೈರಲ್