Webdunia - Bharat's app for daily news and videos

Install App

ಹುಡುಗಿಗಾಗಿ ಲಾಂಗ್ ಬೀಸಿದ ರೌಡಿ ಶೀಟರ್

Webdunia
ಶನಿವಾರ, 11 ಮಾರ್ಚ್ 2023 (18:05 IST)
ಹುಡುಗಿಯರ ಮುಂದೆ  ಬಿಲ್ಡಪ್ ಕೋಡೊದ್ರಲ್ಲಿ ಹುಡುಗರು ಯಾವಾಗಲೂ ಒಂದು ಕೈ ಮುಂದೇನೆ ಇರ್ತಾರೆ,  ಆದ್ರಲ್ಲೂ ಒಂಚೂರು ಎಣ್ಣೆ ಏನಾದ್ರು ಬಿಟ್ಕೊಂಡ್ರೆ ಕಥೆ ಮುಗಿದೆಹೋಯ್ತು, ಶೋ ಕೊಡೋಕ್ಕೋಗಿ ಈಗ ಪೋಲಿಸರ ಕೈಲಿ ತಗಲ್ಲಾಕ್ಕೋಂಡವರ ಕಥೆಯಿದು.ಕೈಯಲ್ಲಿ ಮಾರುದ್ದ ಲಾಂಗ್ ಹಿಡಿದು ,ಬಾರ್ ಸಿಬ್ಬಂದಿ ಮೇಲೆ ಬೀಸಿದ್ದು ಅಲ್ದೆ.ಮದ್ಯದ ಬಾಟಲ್‌ಗಳನ್ನ ಪೀಸ್ ,ಪೀಸ್ ಮಾಡಿದ್ದಾನೆ.ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಆಡುಗೋಡಿಯ ನೀಲಾ ಬಾರ್ ನಲ್ಲಿ ಉತ್ತರ ಪ್ರದೇಶ ಮೂಲದ ಮೀಶೋ ಹಾಗೂ ಅಸ್ಥಾಬ್ ಇಬ್ಬರು ಲವರ್ಸ್ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ಲ್ಲೇ ವಾಸಮಾಡಿಕೊಂಡಿದ್ದಾರೆ.
 
ಯುವತಿ ಮೀಶೋ ಬರ್ತಡೆ ಇತ್ತು ಅಂತ ಕೋರಮಂಗಲದ  ಬಾರ್ ವೊಂದರಲ್ಲಿ  ಎಣ್ಣೆ ಪಾರ್ಟಿ ಮಾಡಿದ್ದಾರೆ .ಜತೆಯಲ್ಲಿ ರೌಡಿ ಶೀಟರ್ ಗಳಾದ ಸಂತೋಷ್, ರಾಮಾಂಜಿ, ಹಾಗೂ ಮತ್ತೊಬ್ಬ ವಾಸಿಂ ಪಾಷ ಐದು ಜನ ಪಾರ್ಟಿ ಮಾಡಿ
ಅಲ್ಲಿಂದ ಬಂದವರೇ ಮತ್ತೆ ಸೀದಾ  ಆಡುಗೋಡಿಯ ನೀಲಾ ಬಾರ್ ಗೆ ಅಲ್ಲಿಗೆ ಬಂದಿದ್ದಾರೆ  ಅಲ್ಲಿ ಕೂಡ ಸರಿಯಾಗಿ ಎಣ್ಣೆ ಕುಡಿದ್ದಿದ್ದಾರೆ. ಕ್ಯಾಶಿಯಾರ್ ಪಕ್ಕದಲ್ಲಿ ನಿಂತಿದ್ದ ಯುವತಿ ಮೀಶೋಳನ್ನ ಪಕ್ಕಕ್ಕೆ ಹೋಗುವಂತೆ ಬಾರ್ ಸಿಬ್ಬಂದಿ ಹೇಳಿದ್ದಾರೆ ಅಷ್ಟೇ ಅದನ್ನೆ ತಪ್ಪಾಗಿ ಅರ್ಥೈಸಿಕೊಂಡಿದ್ದಾಳೆ .

 ಇದನ್ನು ಕಂಡ ರೌಡೀ ಶೀಟರ್ ಸಂತೋಷ್ ಕೈಯಲ್ಲಿ ಲಾಂಗ್ ಹಿಡಿದು ಬಾರ್ ಸಿಬ್ಬಂದಿ ಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಅಲ್ದೆ ಮದ್ಯದ ಬಾಟಲಿಗಳನ್ನ ಕೂಡ ಪೀಸ್ ಪೀಸ್ ಮಾಡಿ ದರ್ಪ ಮೇರೆದಿದ್ದಾನೆ. ಇಷ್ಟಕ್ಕೆ ನಿಲ್ಲದ ಇವನ ಗಲಾಟೆ ಅವಾಚ್ಯಶಬ್ಧಗಳಿಂದ ಬೈದು ನಿಂದನೆ ಮಾಡಿದ್ದಾನೆ.ಇಷ್ಟೆಲ್ಲ ದೃಶ್ಯಗಳು ಬಾರ್ನಲ್ಲಿದ್ದ ಸಿಸಿಟಿಯಲ್ಲಿ ಸೆರೆಯಾಗಿದೆ.ಕುಡಿದ ಮತ್ತಿನಲ್ಲಿ  ಹುಡುಗಿಯ ಮುಂದೆ ಶೋ ಕೊಟ್ಟು ಲಾಂಗ್ ಬೀಸಿದ್ದವರು ತಾವು ಕುಡಿದಿದ್ದ ಎಣ್ಣೆಯ ಬಿಲ್ ನ್ನೂ ಕೂಡ ಕೊಟ್ಟಿದ್ರು. ಆದ್ರೇ ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಮಾಡಿ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂದ ಆಡುಗೋಡಿ ಠಾಣೆಗೆ ಬಾರ್ ಮಾಲೀಕ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಖಾಕಿ ಟೀಂ ರೌಡಿ ಶೀಟರ್ ಸಹಿತ ನಾಲ್ವರನ್ನ ಅರೆಸ್ಟ್ ಮಾಡಿ ತನಿಖೆ ನಡೆಸುತ್ತಿದ್ದಾರೆ.
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾವಿನಲ್ಲೂ ಒಂದಾದ ವೃದ್ಧ ದಂಪತಿ, ಪತಿಯ ಅಂತ್ಯಕ್ರಿಯೆ ವೇಳೆ ಪತ್ನಿಗಾಗಿದ್ದೇನು

ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ: ಪ್ರತಾಪಸಿಂಹ ಬೆನ್ನಲ್ಲೇ ಯತ್ನಾಳ್‌ ಆಕ್ಷೇಪ

ಆಗ ಬಾಯಿಮುಚ್ಚಿಕೊಂಡಿದ್ದವರು ಈಗ ಲಾಭಕ್ಕೆ ಕಾಯುತ್ತಿದ್ದಾರೆ: ಚಲುವರಾಯಸ್ವಾಮಿ ಆಕ್ರೋಶ

ಬುರುಡೆ ಪ್ರಕರಣದಲ್ಲಿ ಸಾಮಾನ್ಯಜ್ಞಾನ ಬಳಸಿದ್ದರೆ ಇಷ್ಟೊಂದು ರಾದ್ಧಾಂತ ಆಗುತ್ತಿರಲಿಲ್ಲ: ರಾಜಣ್ಣ

ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ಇಡಿ ಕಸ್ಟಡಿಗೆ ಕಾಂಗ್ರೆಸ್​ ಶಾಸಕ ಕೆ.ಸಿ. ವೀರೇಂದ್ರ

ಮುಂದಿನ ಸುದ್ದಿ
Show comments