Select Your Language

Notifications

webdunia
webdunia
webdunia
webdunia

ಕಲ್ಲಡ್ಕ, ಮೈಸೂರಿನಲ್ಲಿ ಪ್ರತ್ಯೇಕ ಅಪಘಾತ: 5 ಮಂದಿ ಬೈಕ್ ಸವಾರರ ದುರ್ಮರಣ

ಕಲ್ಲಡ್ಕ, ಮೈಸೂರಿನಲ್ಲಿ  ಪ್ರತ್ಯೇಕ ಅಪಘಾತ: 5 ಮಂದಿ ಬೈಕ್ ಸವಾರರ ದುರ್ಮರಣ
ಮೈಸೂರು/ಮಂಗಳೂರು , ಗುರುವಾರ, 11 ಮೇ 2017 (13:10 IST)
ರಾಜ್ಯದಲ್ಲಿ ಇಂದು ನಡೆದಿರುವ 2 ಪ್ರತ್ಯೇಕ ಻ಪಘಾತಗಳಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ. ಮೀನು ಸಾಗಾಟದ ಲಾರಿ ಡಿಕ್ಕಿಯಾಗಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಕಳೆದ ರಾತ್ರಿ ನಡೆದಿದೆ.

ಮೃತರನ್ನ ಹರೀಶ್, ನಾರಾಯಣ ಮತ್ತು ವಿಶ್ವಾಸ್ ಎಂದು ಗುರ್ತಿಸಲಾಗಿದೆ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇತ್ತ, ಲೈಟ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮೈಸೂರಿನ ಶ್ರೀರಾಂಪುರದ ಜಲವಾಹಿನಿ ಸಮೀಪ ನಡೆದಿದೆ. ಮೃತರನ್ನ ನಂದನ್, ರಾಜೇಶ್ ಎಂದು ಗುರ್ತಿಸಲಾಗಿದೆ. ಅಭಿ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾನಮತ್ತರಾಗಿ ಬೈಕ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕೆ.ಆರ್. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರುವನ್ನ ಕೊಂದ ಅನಕೊಂಡ ಮೇಲೆ ಸೇಡು ತೀರಿಸಿಕೊಂಡ ಹಸು..!