Select Your Language

Notifications

webdunia
webdunia
webdunia
webdunia

ಸಿಡಿಲ ಹೊಡೆತಕ್ಕೆ 6 ಬಲಿ

ಸಿಡಿಲ ಹೊಡೆತಕ್ಕೆ 6 ಬಲಿ
ಶಿವಮೊಗ್ಗ , ಶನಿವಾರ, 14 ಮೇ 2016 (12:07 IST)
ರಾಜ್ಯದ ಹಲವು ಭಾಗಗಳಲ್ಲಿ ಮಳೆ ಅಬ್ಬರಿಸುತ್ತಿದ್ದು, ಸಿಡಿಲ ಹೊಡೆತಕ್ಕೆ 6 ಮಂದಿ ಮೃತ ಪಟ್ಟಿದ್ದಾರೆ. ಕಲಬುರಗಿಯಲ್ಲಿ ಇಬ್ಬರು, ಧಾರವಾಡ, ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
 
40ಕ್ಕೂ ಹೆಚ್ಚು ಜಾನುವಾರುಗಳು ಸಿಡಿಲಿನ ಹೊಡೆತಕ್ಕೆ ಮರಣವನ್ನಪ್ಪಿದ್ದು ಹಲವೆಡೆ ಮನೆ, ಅಂಗಡಿ, ಕಟ್ಟಡಗಳಿಗೆ ಹಾನಿಯಾಗಿದೆ.
 
ಕಲಬುರಗಿಯ ಆಳಂದ ತಾಲೂಕಿನ ಜವಳಗಾ (ಬಿ) ಗ್ರಾಮದಲ್ಲಿ ಅಪ್ಪ- ಮಗ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಮೃತರನ್ನು ರೈತರಾದ ಚಂದ್ರಕಾಂತ ಮುದ್ದುಡಗಿ (65), ಪುತ್ರ ಸಿದ್ದಪ್ಪ ಮುದ್ದುಡಗಿ (21) ಎಂದು ಗುರುತಿಸಲಾಗಿದೆ.  ಅವರೊಂದಿಗಿದ್ದ ಎರಡು ಎತ್ತುಗಳು ಸಹ ಸಿಡಿಲಿಗೆ ದುರ್ಮರಣವನ್ನಪ್ಪಿವೆ. 
 
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮಲಘಾಣ ತಾಂಡಾದಲ್ಲಿ ಸಂತೋಷ (25), ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಲ್ಲಿ ಕ್ಯಾರಿ ಬಸವರಾಜ (45), ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಳವಳ್ಳಿಯಲ್ಲಿ ಓಕಾಂರಪ್ಪ ಮಲ್ಲಾಡ್‌ (46), ಹುಬ್ಬಳ್ಳಿ ತಾಲೂಕಿನ ಕೂಡಿಗಕೇರಿಯಲ್ಲಿ ಭೀಮಪ್ಪ ಮೊರಾಬಾದ್‌ (25) ಸಿಡಿಲಿನ ಹೊಡೆತಕ್ಕೆ ಸಾವನ್ನಪ್ಪಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

12ರ ಬಾಲಕಿಯ ಮೇಲೆ ಮಾವನಿಂದ ಅತ್ಯಾಚಾರ