Select Your Language

Notifications

webdunia
webdunia
webdunia
webdunia

ನೆರೆಯಲ್ಲಿ ಮನೆ ಕಳಕೊಂಡವರಿಗೆ 5 ಲಕ್ಷ ರು

ನೆರೆಯಲ್ಲಿ ಮನೆ ಕಳಕೊಂಡವರಿಗೆ 5 ಲಕ್ಷ ರು
ಬೆಂಗಳೂರು , ಶನಿವಾರ, 14 ಆಗಸ್ಟ್ 2021 (08:03 IST)
ಬೆಂಗಳೂರು (ಆ.14):  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜುಲೈನಲ್ಲಿ ಉಂಟಾದ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ, ದುರಸ್ತಿ ಕಾರ್ಯ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಭಾಗಶಃ ಅಥವಾ ಸಂಪೂರ್ಣ ಹಾನಿಗೊಂಡ ಮನೆಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಅನ್ವಯ ನೀಡಬೇಕಿದ್ದ 95,100 ರು. ಬದಲಿಗೆ ರಾಜ್ಯದಿಂದ ಹೆಚ್ಚುವರಿಯಾಗಿ 4,04,900 ರು. ಸೇರಿಸಿ 5 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದೆ.
ಜುಲೈನಲ್ಲಿ ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕು ಎಂದು ಘೋಷಿಸಲಾಗಿತ್ತು. ಈ ವ್ಯಾಪ್ತಿಯಲ್ಲಿ ಮನೆ ಹಾನಿ, ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವ ನೆರೆ ಸಂತ್ರಸ್ತರಿಗೆ ಪರಿಹಾರವನ್ನು ಕೇಂದ್ರ ಸರ್ಕಾರದ ಎಸ್ಡಿಆರ್ಎಫ್, ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ನೀಡಲಾಗುತ್ತಿತ್ತು. ಆಗಸ್ಟ್ 12ರಂದು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು ಪರಿಷ್ಕೃತ ಪರಿಹಾರ ದರ ಪಟ್ಟಪ್ರಕಟಿಸಿದೆ.
ಪರಿಷ್ಕೃತ ಪರಿಹಾರ ದರ:  ಪ್ರವಾಹ ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತು, ಬಟ್ಟೆ-ಬರೆ ಹಾನಿಗೆ 3,800 ರು. ಇರುವ ಮಾರ್ಗಸೂಚಿ ದರದ ಬದಲಿಗೆ 10 ಸಾವಿರು ರು. ನೀಡಲಾಗುವುದು. ಶೇ.75ಕ್ಕಿಂತ ಹೆಚ್ಚು (ಸಂಪೂರ್ಣ) ಹಾನಿಯಾಗಿರುವ ಮನೆಗಳಿಗೆ 95,100 ರು. ಪರಿಹಾರ ನೀಡಲಾಗುತ್ತಿತ್ತು. ಈ ಮೊತ್ತವನ್ನು 5 ಲಕ್ಷ ರು.ಗಳಿಗೆ ಪರಿಷ್ಕರಣೆ ಮಾಡಲಾಗಿದೆ. ಶೇ.25ರಿಂದ ಶೇ.75ರಷ್ಟುತೀವ್ರ ಹಾನಿಯಾಗಿರುವ (ಕೆಡವಿ ಪುನರ್ನಿರ್ಮಾಣ ಮಾಡಬೇಕಿರುವ) ಮನೆಗಳಿಗೆ 95,100 ರು. ಬದಲಿಗೆ 5 ಲಕ್ಷ ರು., ಶೇ.25ರಿಂದ ಶೇ.75ರಷ್ಟುತೀವ್ರ ಹಾನಿಯಾಗಿದ್ದರೂ ದುರಸ್ತಿ ಮಾಡಬಹುದಾದ ಮನೆಗೆ 95,100 ರು.ಗಳಿದ್ದ ಪರಿಹಾರವನ್ನು 3 ಲಕ್ಷ ರು.ಗಳಿಗೆ ಪರಿಷ್ಕರಣೆ ಮಾಡಲಾಗಿದೆ.
ಇನ್ನು ಶೇ.15ರಿಂದ 25ರಷ್ಟುಭಾಗಶಃ ಮನೆ ಹಾನಿಗೆ 5,200 ರು.ಗಳಿದ್ದ ಪರಿಹಾರವನ್ನು 50 ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ. ಪರಿಷ್ಕೃತ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸಲಿದ್ದು, ಜಿಲ್ಲಾ ವಿಪತ್ತು ಪರಿಹಾರ ನಿಧಿಯಡಿ ಪರಿಹಾರವನ್ನು ಒದಗಿಸಲಾಗುವುದು ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಮತ್ತು ಸೇವೆಗಳ ಇಲಾಖೆ ಆದೇಶದಲ್ಲಿ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸಿಎಂ ನೇತೃತ್ವದ ಸಭೆ: ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ? ಭಾಗಶಃ ಲಾಕ್ಡೌನ್?