Select Your Language

Notifications

webdunia
webdunia
webdunia
webdunia

ಪಿಯು ಪರೀಕ್ಷೆ ಅಕ್ರಮ ಎಸಗಿದ ಮೂವರ ವಿರುದ್ಧ ಕೇಸ್: ತನ್ವೀರ್ ಸೇಠ್

ಪಿಯು ಪರೀಕ್ಷೆ ಅಕ್ರಮ ಎಸಗಿದ ಮೂವರ ವಿರುದ್ಧ ಕೇಸ್: ತನ್ವೀರ್ ಸೇಠ್
Bengaluru , ಸೋಮವಾರ, 13 ಮಾರ್ಚ್ 2017 (20:09 IST)
ರಾಯಚೂರಿನಲ್ಲಿ ಪಿಯು ಸಿಯ ಲೆಕ್ಕಶಾಸ್ತ್ರ ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ವಿ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ತನ್ವೀರ್ ಸೇಠ್, ಪ್ರಶ್ನೆಪತ್ರಿಕೆ ಲೀಕ್ ಆಗಿಲ್ಲ, ಪರೀಕ್ಷಾ ಅಕ್ರಮ ನಡೆದಿದೆ ಎಂದಿದ್ದಾರೆ.

ಪಿಯುಸಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧನಗೌಡ, ಪ್ರಿನ್ಸಿಪಾಲ್ ಮಹೇಶ್, ಶರಣಬಸವ, ಎಂಬುವವರ ವಿರುದ್ಧ ಐಪಿಸಿ ಸೆಕ್ಷನ್ 170ರಡಿ ಪ್ರಕರಣ ದಾಖಲಿಸಿರುವುದಾಗಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ಕಳಿಂಗ ಕಾಲೇಜಿನ ಮಾನ್ಯತೆ ರದ್ದು ಮಾಡುವುದಾಗಿಯೂ ಸಚಿವರು ಹೇಳಿದ್ದಾರೆ.

ಪರೀಕ್ಷಾ ಅಧಿಕಾರಿ ಸೋಗಿನಲ್ಲಿ ಪರೀಕ್ಷಾ ಕೆಂದ್ರಕ್ಕೆ ತೆರಳಿದ್ದ ಸಿದ್ಧನಗೌಡ ಪ್ರಶ್ನೆಪತ್ರಿಕೆ ಫೋಟೋ ತೆಗೆದು ಪ್ರಿನ್ಸಿಪಾಲ್ ಮಹೇಶ್`ಗೆ ರವಾನಿಸಿದ್ದ. ಬಳಿಕ ವಾಟ್ಸಾಪ್ ಮೂಲಕ ಇತರೆಡೆ ಹರಡಿದೆ ಎಂದು ಸಚಿವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್