Webdunia - Bharat's app for daily news and videos

Install App

3.47 ಕೋಟಿ ರೂ.ವೆಚ್ಚದ ಕಾಮಗಾರಿಗೆ ಚಾಲನೆ

Webdunia
ಸೋಮವಾರ, 7 ಫೆಬ್ರವರಿ 2022 (20:40 IST)
ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ, ಕುಡಿಯುವ ನೀರು, ಒಳಚರಂಡಿ, ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭೂಮಿಪೂಜೆ ನೇರವೇರಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರ ಜನರ ಮೂಲಭೂತ ಸೌಲಭ್ಯಗಳಿಗೆ ಸಾಕಷ್ಟು ಹಣ ವಿನಿಯೋಗಿಸುತ್ತಿದೆ. ಗುಣಮಟ್ಟದ ಕಾಮಗಾರಿಯನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಪರಿಶೀಲಿಸಬೇಕು ಎಂದು ಶಾಸಕರು ಹೇಳಿದರು.
ಚರಂಡಿಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿರುವ ಬಗ್ಗೆ ದೂರು ಬಂದಿದೆ. ಸಂಬಂಧಿಸಿದವರು ರಸ್ತೆ ನಿರ್ಮಿಸುವಾಗ ಜಾಗ ಬಿಟ್ಟುಕೊಡಬೇಕು. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾದಾಪುರ ಮಾರುಕಟ್ಟೆ ರಸ್ತೆ, ಜಂಬೂರು, ಮೂವತ್ತೊಕ್ಲು ರಸ್ತೆ, ಕಾಂಡನಕೊಲ್ಲಿ ರಸ್ತೆ, ಜಂಬೂರು ಕುಡಿಯುವ ನೀರು, ಕೇಂದ್ರ ಜಲ ಜೀವನ್ ಯೋಜನೆ, ಎನ್‌ಡಿಆರ್‌ಎಫ್ ಯೋಜನೆ ಸೇರಿದಂತೆ ಜಿ.ಪಂ. ಮತ್ತು ಲೋಕಪಯೋಗಿ ಇಲಾಖೆಯಡಿ ಕೈಗೊಳ್ಳಲಾಗುವ ರೂ.3.47 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.
ಮಾದಾಪುರ ಗ್ರಾ.ಪಂ ಅಧ್ಯಕ್ಷೆ ಕೆ.ಸಿ.ಶೀಲಾ, ಉಪಾಧ್ಯಕ್ಷ ಗೋಪಿ, ಗ್ರಾ.ಪಂ ಸದಸ್ಯರಾದ ಕೆ.ಎ.ಲತೀಫ್, ಪಿ.ಡಿ.ಅಂತೋಣಿ, ಸುರೇಶ, ಮನು ಬಿದ್ದಪ್ಪ, ಜ್ಯೋತಿ, ಗಿರೀಶ, ಸೋಮಣ್ಣ, ನಿರೂಪ, ಮಾನಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಕುಮಾರ್, ಜಿ.ಪಂ ಮಾಜಿ ಸದಸ್ಯ ಟಿ.ಸಿ.ಸಂದೇಶ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾಪಂಡ ಉಮೇಶ, ಬಿಜೆಪಿ ಮುಖಂಡ ಕೊಪ್ಪತ್ತಂಡ ಗಣೇಶ, ಸುಭಾಷ್, ಜಿ.ಪಂ.ಅಭಿಯಂತರರಾದ ವಿರೇಂದ್ರ, ಪಿಡಬ್ಲ್ಯುಡಿ ಇಂಜಿನಿಯರ್ ಶ್ರೀನಿವಾಸ್ ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಕ್ಯಾಬಿನೆಟ್ ವಿಸ್ತರಣೆ: ಸಚಿವರ ಲಿಸ್ಟ್ ಇನ್ನೂ ಕೊಡದ ಹೈಕಮಾಂಡ್

ಕೆಆರ್ ಎಸ್ ಡ್ಯಾಮ್ 100 ಅಡಿ ಹೆಚ್ಚಳ: ಇದರಿಂದ ಕಾವೇರಿ ನೀರಿನ ಸಮಸ್ಯೆ ಬಗೆಹರಿಯುತ್ತಾ

ಎಲ್ಲೆಲ್ಲೂ ಮಳೆ ಬರ್ತಿದೆ, ಬೆಂಗಳೂರಿನಲ್ಲಿ ಮಾತ್ರ ಯಾಕಿಲ್ಲ, ಯಾವಾಗ ಬರುತ್ತದೆ ಇಲ್ಲಿದೆ ವಿವರ

ಗರ್ಲ್ ಫ್ರೆಂಡ್ ಜೊತೆ ಸುಮ್ನೆ ಸಿನಿಮಾ ನೋಡೋದು ಬಿಟ್ಟು ಈ ಕೆಲಸ ಮಾಡಿದ್ದಕ್ಕೆ ಯುವಕನಿಗೆ ಥಿಯೇಟರ್ ನಲ್ಲಿ ಬಿತ್ತು ಗೂಸಾ Video

Karnataka Weather:ರಾಜ್ಯದಲ್ಲಿ ಈ ವಾರ ಎಲ್ಲೆಲ್ಲಿ ಮಳೆಯಾಗಲಿದೆ, ಇಲ್ಲಿದೆ ವಾರದ ಹವಾಮಾನ ವರದಿ

ಮುಂದಿನ ಸುದ್ದಿ
Show comments