Webdunia - Bharat's app for daily news and videos

Install App

21 ಶಾಸಕರ ಡಬಲ್ ವೇತನಕ್ಕೆ ಬಿತ್ತು ಕತ್ತರಿ

Webdunia
ಮಂಗಳವಾರ, 26 ಸೆಪ್ಟಂಬರ್ 2017 (22:21 IST)
ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರಾಗಿರುವ ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದ ಶಾಸಕ ಸ್ಥಾನಕ್ಕೆ ನೀಡುತ್ತಿದ್ದ ವೇತನಕ್ಕೆ ಕತ್ತರಿ ಬಿದ್ದಿದೆ. ಈ ಕುರಿತು ಸ್ಪೀಕರ್ ಕೆ.ಬಿ.ಕೋಳಿವಾಡ ಆದೇಶದ ಮೇರೆಗೆ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಅಧ್ಯಕ್ಷರಾಗಿ ಇರುವ ಶಾಸಕರು ನಿಗಮದಿಂದಲೇ ವೇತನ ಪಡೆಯಬೇಕು. ವಿವಿಧ ಸಮಿತಿಗಳ ಸದಸ್ಯರಾಗಿ ಭತ್ಯೆ ಪಡೆಯಬಹುದು. ಶಾಸಕರಿಗೆ ವೇತನ, ಭತ್ಯೆ, ಪೆಟ್ರೋಲ್, ಮನೆ ಬಾಡಿಗೆ ನೀಡುತ್ತಾರೆ. ಶಾಸಕರು ನಿಗಮ ಮಂಡಳಿ ಅಧ್ಯಕ್ಷರಾಗಿ ಸಚಿವ ಸಂಪುಟ ದರ್ಜೆ ಸ್ಥಾನಮಾನ, ಭತ್ಯೆಗಳನ್ನು ಪಡೆಯುತ್ತಾರೆ. ಹೀಗಾಗಿ ಎರಡೆರಡು ಸಂಬಳ, ಭತ್ಯೆಗಳನ್ನು ಪಡೆಯುವುದಕ್ಕೆ ಸ್ಪೀಕರ್ ಬ್ರೇಕ್ ಹಾಕಿದ್ದಾರೆ.

ಇದು ಲಾಭದಾಯಕ ಹುದ್ದೆ ವ್ಯಾಪ್ತಿಗೆ ಒಳಪಡಲಿದೆ. ಇನ್ನು ಎರಡೆರಡು ಸಂಬಳ ಪಡೆದರೆ ಕಾನೂನಿನ ಉಲ್ಲಂಘನೆಯಾಗಲಿದೆ. ಇದಕ್ಕಾಗಿ ಒಂದು ಹುದ್ದೆಗೆ ಒಂದು ವೇತನ ಎಂಬ ಆದೇಶದಡಿ ವಿಧಾನಸಭೆ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ.

ಒಂದುವೇಳೆ ಎರಡೆರಡು ವೇತನ, ಭತ್ಯೆ ಪಡೆದರೆ ಶಾಸಕರ ಸ್ಥಾನಕ್ಕೆ ಕುತ್ತು ಬೀಳಲಿದೆ. ಅಂದರೆ ಸರ್ಕಾರಕ್ಕೆ ಅನರ್ಹತೆ ಮಾಡುವ ಅವಕಾಶವಿದೆ. ಈ ಮೂಲಕ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ಆರ್.ವಿ.ದೇವರಾಜ್, ಎಂ.ಬಿ.ಟಿ.ನಾಗರಾಜ್, ಕೆ.ವಸಂತ ಬಂಗೇರ ಸೇರಿದಂತೆ 21 ಶಾಸಕರ ಡಬಲ್ ವೇತನಕ್ಕೆ ಕತ್ತರಿ ಬೀಳಲಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments