144 ಸೆಕ್ಷನ್ ಜಾರಿ - ರಸ್ತೆ ಮೇಲೆ ಅಡ್ಡಾಡಿದರೆ ಜಿಲ್ಲಾಧಿಕಾರಿ ಏನು ಮಾಡ್ತಾರೆ ಗೊತ್ತಾ?

Webdunia
ಶನಿವಾರ, 21 ಮಾರ್ಚ್ 2020 (15:49 IST)
ಕೊರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ  ಮುಂಜಾಗ್ರತವಾಗಿ ಜಿಲ್ಲೆಯಾದ್ಯಂತ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಆದರೂ ಕಲಬುರಗಿಯಲ್ಲಿ ಕೆಲವು ಯುವಕರು ನಿಷೇಧಾಜ್ಞೆಯ ತೀವ್ರತೆ ಅರಿಯದೆ ರಸ್ತೆ‌ ಮೇಲೆ ಓಡಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹವರನ್ನು ವಶಕ್ಕೆ ಪಡೆದು ಕೊರೋನಾ ವಿರುದ್ಧದ ಹೋರಾಟದಲ್ಲಿ ಸ್ವಯಂ ಸೇವಕರನ್ನಾಗಿ ಬಳಸಿಕೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಕೊರೋನಾ ವೈರಸ್ ಸಾಂಕ್ರಾಮಿಕ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಸಿ.ಆರ್.ಪಿ‌.ಸಿ. ಕಾಯ್ದೆ 1973 ರ ಕಲಂ 144ರನ್ವಯ‌ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮಾರ್ಚ್ 22ರ ವರೆಗೆ ಇರಲಿದೆ.

ಸಾರ್ವಜನಿಕರು ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಪಡೆಯಲು ಹೊರತುಪಡಿಸಿ ಅನಾವಶ್ಯಕ ವಾಗಿ ಮನೆಯಿಂದ ಹೊರಬರಬಾರದು. ಈ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಡಿ‌.ಸಿ. ಶರತ್ ಬಿ. ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮಕ್ಕಳು ಚಾಕಲೇಟ್ ತಿಂದ ತಕ್ಷಣ ನೀರು ಕುಡಿಯಬಹುದೇ ಇಲ್ಲಿದೆ ಟಿಪ್ಸ್ video

ಪುರುಷರು ಒಣ ಮೀನು ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಕಾಲಿನ ಮಾಂಸಖಂಡಗಳು ನೋವಾಗುತ್ತಿದೆಯಾ, ಇದಕ್ಕೆ ಕಾರಣ ಇಲ್ಲಿದೆ

ಮುಂದಿನ ಸುದ್ದಿ
Show comments