Webdunia - Bharat's app for daily news and videos

Install App

ಆನ್ಲೈನಲ್ಲಿ ಗೋಣಿಚೀಲ ಖರೀದಿಸಲು ಯತ್ನಿಸಿದ ಶಿಕ್ಷಕಿಗೆ 1 ಲಕ್ಷ ಟೋಪಿ

Webdunia
ಸೋಮವಾರ, 2 ಆಗಸ್ಟ್ 2021 (16:11 IST)
ಶಿವಮೊಗ್ಗ (ಆ.02): ಆನ್ಲೈನ್ ಮೂಲಕ ಗೋಣಿ ಚೀಲ ಖರೀದಿಸಲು ಹೋಗಿ ಶಿಕ್ಷಕಿಯೊಬ್ಬರು ಬರೋಬ್ಬರಿ 1.13 ಲಕ್ಷ ರು. ಕಳೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

•ಆನ್ಲೈನ್ ಮೂಲಕ ಗೋಣಿ ಚೀಲ ಖರೀದಿಸಲು ಹೋಗಿ ಮೋಸ
•ಶಿಕ್ಷಕಿಯೊಬ್ಬರು ಬರೋಬ್ಬರಿ 1.13 ಲಕ್ಷ ರು. ಕಳೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ
•ಶಿಕಾರಿಪುರದ ಶಿಕ್ಷಕಿ ಖಾಲಿ ಗೋಣಿಚೀಲ ಖರೀದಿಗೆ ಮುಂದಾದಾಗ ವಂಚನೆ

ಶಿಕಾರಿಪುರದ ಶಿಕ್ಷಕಿ ಖಾಲಿ ಗೋಣಿಚೀಲ ಖರೀದಿಗೆ ಗೂಗಲ್ನಲ್ಲಿ ಹುಡುಕಾಟ ನಡೆಸಿದ್ದರು. ಆಗ ಆನ್ಲೈನ್ ಟ್ರೇಡಿಂಗ್ ವೆಬ್ಸೈಟ್ ಸಿಕ್ಕಿದೆ. ಅದಕ್ಕೆ ಇ-ಮೇಲ್ ಕೂಡ ಮಾಡಿದ್ದರು. ಏ.11ರಂದು ಇ-ಮೇಲ್ ಐಡಿಯಿಂದ ಪ್ರತಿಕ್ರಿಯೆ ಬಂದಿತ್ತು. ಇ-ಮೇಲ್ ಸಂದೇಶದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂದು ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡಿದ್ದ.
ಮೊಬೈಲ್ ವಾಟ್ಸಾಪ್ ನಂಬರ್ ಪಡೆದಿದ್ದು, ಇಬ್ಬರು ಪರಸ್ಪರ ವ್ಯವಹಾರದ ಬಗ್ಗೆ ಚರ್ಚಿಸಿದ್ದರು. 26 ಟನ್ ಖಾಲಿ ಗೋಣಿಚೀಲಕ್ಕೆ ಶಿಕ್ಷಕಿ ಬೇಡಿಕೆ ಇಟ್ಟಿದ್ದರು.
ಆಗ ಅರ್ಧ ಹಣ ಮುಂಗಡವಾಗಿ ಕಳುಹಿಸುವಂತೆ ವ್ಯಕ್ತಿ ಸೂಚಿಸಿದ್ದರು. ಅದರಂತೆ ದೆಹಲಿಯ ಬ್ಯಾಂಕ್ ಖಾತೆಯೊಂದಕ್ಕೆ 1.13 ಲಕ್ಷ ರು. ಹಣವನ್ನು ಆನ್ಲೈನ್ ಮೂಲಕ ಶಿಕ್ಷಕಿ ಹಣ ಜಮೆ ಮಾಡಿದ್ದರು. ನಂತರ ಆತ ವಾಹನದ ಸಾಗಣೆ ವೆಚ್ಚವಾಗಿ ಮತ್ತಷ್ಟುಹಣ ಸಂದಾಯ ಮಾಡುವಂತೆ ಸೂಚಿಸಿದ್ದಾರೆ. ಕೊಡದಿದ್ದಾಗ ಸಂಪರ್ಕ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಕಿ ದೂರು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸಿಎಂ ರೇಖಾ ಗುಪ್ತಾ ಕೊಲ್ಲುವುದಾಗಿ ಬೆದರಿಕೆ: ವ್ಯಕ್ತಿ ಅರೆಸ್ಟ್‌

Siddaramaiah: ಬಕ್ರೀದ್ ಆಚರಣೆಯಿಂದ ದೂರ ಉಳಿದ ಸಿದ್ದರಾಮಯ್ಯ: ಚಿನ್ನಸ್ವಾಮಿ ಇಫೆಕ್ಟ್

ವಿರಾಟ್‌ ಕೊಹ್ಲಿ ಮೇಲಿನ ಪ್ರೀತಿಗೆ ಕೈ ಕೂಯ್ಕೊಂಡ ಹುಚ್ಚು ಅಭಿಮಾನಿ, Viral Video

Chhattisgarh Naxal Encounter: ಐವರು ನಕ್ಸಲರ ಹತ್ಯೆ

ಸಿಎಂ ರಾಜೀನಾಮೆ ಕೊಟ್ಟು ಕ್ಷಮೆ ಕೇಳಲಿ: ಗೋವಿಂದ ಕಾರಜೋಳ

ಮುಂದಿನ ಸುದ್ದಿ
Show comments