Select Your Language

Notifications

webdunia
webdunia
webdunia
webdunia

‘ಲೋಕಸಭೆಗೆ ಹೋಗದೆ ಯಡಿಯೂರಪ್ಪ-ಶೋಭಾ ಕರಂದ್ಲಾಜೆ ಏನು ಮಾಡ್ತಿದ್ದಾರೆ?’

‘ಲೋಕಸಭೆಗೆ ಹೋಗದೆ ಯಡಿಯೂರಪ್ಪ-ಶೋಭಾ ಕರಂದ್ಲಾಜೆ ಏನು ಮಾಡ್ತಿದ್ದಾರೆ?’
Bangalore , ಮಂಗಳವಾರ, 28 ಮಾರ್ಚ್ 2017 (12:09 IST)
ಬೆಂಗಳೂರು: ನಮ್ಮ ರಾಜ್ಯದ ಸಚಿವರು ಸದನಕ್ಕೆ ಬರದೆ ಉಪಚುನಾವಣೆ ಪ್ರಚಾರಕ್ಕೆ ತೆರಳಿದ್ದಾರೆ ಎಂದು ಟೀಕಿಸಿದ ಬಿಜೆಪಿಗೆ ಸಿಎಂ ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಇಂದು ತಿರುಗೇಟು ನೀಡಿದ್ದಾರೆ.

 

‘ನಮ್ಮ ಸಚಿವರು ಯಾಕೆ ಬರಲ್ಲ ಅಂತ ಟೀಕಿಸುವ ಬಿಜೆಪಿಯವರು, ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಲೋಕಸಭೆಗೆ ಯಾಕೆ ಹೋಗ್ತಾ ಇಲ್ಲ? ಅವರು ನಂಜನಗೂಡಿನಲ್ಲಿ ಬೀಡುಬಟ್ಟಿಲ್ವಾ? ಅವರೆಲ್ಲಾ ಲೋಕಸಭೆಗೆ ಹೋಗದೇ ಇಲ್ಲಿ ಯಾಕೆ ಬೊಬ್ಬೆ ಹಾಕ್ತಾ ಇದ್ದಾರೆ?’ ಎಂದು ಪ್ರಶ್ನಿಸಿದರು.

 
ಈ ಸಂದರ್ಭದಲ್ಲಿ ಉಪಚುನಾವಣೆಯಲ್ಲಿ ಗೆಲ್ಲುವವರು ನಾವೇ ಎಂದು ಸಿಎಂ ಸವಾಲು ಹಾಕಿದರು. ಬಿಜೆಪಿಯವರು ಏನೇ ಹೇಳಲಿ ಉಪ ಚುನಾವಣೆಯಲ್ಲಿ ಗೆಲುವು ನಮ್ಮದೇ. ರಾಜ್ಯದ ಸಚಿವರನ್ನು ಟೀಕಿಸುವವರು, ತಮ್ಮ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಯೋಗಿಗೆ ಜಿಂದಾಬಾದ್ ಎಂದಿದ್ದಕ್ಕೆ ಬಿತ್ತು ಹೆಣ..!