Select Your Language

Notifications

webdunia
webdunia
webdunia
webdunia

‘ಶಶಿಕಲಾರಿಂದ ಒಂದು ಬಿಸ್ಕಟ್ ಕೂಡಾ ತೆಗೆದುಕೊಂಡಿಲ್ಲ’

‘ಶಶಿಕಲಾರಿಂದ ಒಂದು ಬಿಸ್ಕಟ್ ಕೂಡಾ ತೆಗೆದುಕೊಂಡಿಲ್ಲ’
Bangalore , ಗುರುವಾರ, 13 ಜುಲೈ 2017 (11:25 IST)
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ನಟರಾಜನ್ ಗೆ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂಬ ಕಾರಾಗೃಹ ಉಪಮಹಾ ನಿರೀಕ್ಷಕಿ ರೂಪಾ ಅವರ ಆರೋಪಗಳನ್ನು ಡಿಜಿಪಿ ಸತ್ಯನಾರಾಯಣ ತಳ್ಳಿ ಹಾಕಿದ್ದಾರೆ.


ಶಶಿಕಲಾರಿಂದ 2 ಕೋಟಿ ರೂ. ಲಂಚ ಪಡೆದಿದ್ದಾರೆಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸತ್ಯನಾರಾಯಣ ‘ನನ್ನ ಬಗ್ಗೆ ಮಾಧ್ಯಮಗಳಲ್ಲಿ ಬೇಕಾಬಿಟ್ಟಿ ಮಾತನಾಡಲು ರೂಪಾ ಯಾರು? ಶಶಿಕಲಾರಿಂದ ನಾನು 2 ಕೋಟಿಯಲ್ಲ, ಒಂದು ಬಿಸ್ಕತ್ತನ್ನೂ ಪಡೆದಿಲ್ಲ’ ಎಂದು ಸತ್ಯನಾರಾಯಣ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಸತ್ಯನಾರಾಯಣ ನನ್ನ ಮೇಲಿನ ಆರೋಪಗಳ ತನಿಖೆಗೆ ಸಿದ್ಧ ಎಂದಿದ್ದಾರೆ. ನನ್ನ ವಿರುದ್ಧ ರೂಪಾ ಪಿತೂರಿ ನಡೆಸಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ. ಅತ್ತ ಡಿಐಜಿ ರೂಪಾ ಕೂಡಾ ತನಿಖೆಯಾಗಲಿ ಎಂದಿದ್ದಾರೆ. ಅಂತೂ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ನಡುವಿನ ವೈಯಕ್ತಿಕ ಸಮರದಿಂದಾಗಿ ಪೊಲೀಸ್ ಇಲಾಖೆಯ ಮಾನ ಹರಾಜಾಗುತ್ತಿರುವುದಂತೂ ಸುಳ್ಳಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೀಟಲ್ ಡ್ರಾಯಿಂಗ್ ಅಂದ್ರೆ ಗೊತ್ತಾ..ಈ ಚಿತ್ರಕ್ಕೆ ಈಗ ಬಾರಿ ಡಿಮ್ಯಾಂಡ್