Webdunia - Bharat's app for daily news and videos

Install App

ಮದುವೆಯಾಗಿ 20 ವರ್ಷವಾದರೂ, ಪತ್ನಿ ಮೇಲೆ ಅನುಮಾನ ಪಟ್ಟು ನಿರಂತರ ಜಗಳ

Webdunia
ಭಾನುವಾರ, 28 ನವೆಂಬರ್ 2021 (21:38 IST)
ಬೆಂಗಳೂರು: ಮದುವೆಯಾಗಿ 20 ವರ್ಷವಾದರೂ, ಪತ್ನಿ ಮೇಲೆ ಅನುಮಾನ ಪಟ್ಟು ನಿರಂತರ ಜಗಳ ಮಾಡುತ್ತಿದ್ದರು. ಪತ್ನಿ ಕೊಲೆ ಮಾಡಿ ನೆರೆ ರಾಜ್ಯಕ್ಕೆ ಹೋಗಿದ್ದ ಪತಿ ಬೀದಿ ಹೆಣವಾಗಿದ್ದಾನೆ.  
ನಿಸಾರ್ ಹಾಗೂ ಆಯೇಶಾ ಆಡುಗೋಡಿಯ ರಾಜೇಂದ್ರ ಸಾಕಷ್ಟು ವಾಸವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು 20ಕ್ಕೂ ಹೆಚ್ಚು ವರ್ಷಗಳೇ ಕಳೆದಿವೆ. ಆದರೂ ಪತ್ನಿಯ ಶೀಲದ ಮೇಲೆ ಪತಿ ಸದಾ ಅನುಮಾನ ವ್ಯಕ್ತಪಡಿಸಿದ್ದ. ನಿತ್ಯ ದಂಪತಿಯ ನಡುವೆ ಕಲಹ ಆಗುತಿತ್ತು.
ಪತ್ನಿಗೆ ಒಂದು ಗತಿ ಕಾಣಿಸಲು ನಿರ್ಧರಿಸಿದ್ದ ನಿಸಾರ್, ಆಕೆಯ ಸಾವು ಸಹಜ‌ ಎಂದು ಬಿಂಬಿಸುವಂತೆ ಕೊಲೆ ಮಾಡಲು ನಿರ್ಧರಿಸಿದ್ದ. ತನ್ನ ಯೋಜನೆಯಂತೆ ಪೆಟ್ರೋಲ್ ಸುರಿದು ಸಿಲಿಂಡರ್ ಆನ್ ಮಾಡಿ ಬ್ಲಾಸ್ಟ್‌ನಂತೆ ಬಿಂಬಿಸಿ ಪತ್ನಿ ಆಯೇಶಾಳನ್ನು ಕೊಂದಿದ್ದ. ಆಡುಗೋಡಿಯ ರಾಜೇಂದ್ರನಗರದಲ್ಲಿ ಈ ಘಟನೆ ನಡೆದಿತ್ತು.
ಈ ಬಗ್ಗೆ ಪೊಲೀಸರಿಗೆ ಪತಿಯ ಮೇಲೆ ಅನುಮಾನ ವ್ಯಕ್ತವಾಗಿತ್ತು. ನ. 19ರಂದು ಪತ್ನಿಯನ್ನು ಕೊಂದಿದ್ದ ನಿಸಾರ್ ನೆರೆ ರಾಜ್ಯಕ್ಕೆ ಪರಾರಿ ಆಗಿದ್ದ. ನಿಸಾರ್‌ಗಾಗಿ ಆಡುಗೋಡಿ ಪೊಲೀಸರು ತೀವ್ರ ಶೋಧ ಕಾರ್ಯ ಮಾಡಿದ್ದರು. ಆದರೆ, ಆಗಾಗ ಫೋನ್ ಆನ್ ಮಾಡಿ ಸ್ವಿಚ್ ಆಫ್ ಮಾಡುತ್ತಿದ್ದ. ಇದರಿಂದ ಲೋಕೇಷನ್ ಟ್ರೇಸ್ ಮಾಡುವುದು ಕಷ್ಟವಾಗಿತ್ತು. ಪತ್ನಿಯ ಕೊಲೆ ವೇಳೆ ಗಾಯಾಳುವಾಗಿದ್ದ ನಿಸಾರ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿರಲಿಲ್ಲ. ಗಾಯದ ನೋವು ವಿಪರೀತವಾದಾಗ ಮಗನಿಗೆ ಫೋನ್ ಮಾಡಿದ್ದ ನಿಸಾರ್. ಫೋನ್ ನೆರೆ ರಾಜ್ಯದಲ್ಲಿ ಇರುವುದು ಲೋಕೇಷನ್ ಟ್ರೇಸ್ ವೇಳೆ ಪತ್ತೆಯಾಗಿತ್ತು.
ಆರೋಪಿಯ ಬಂಧನಕ್ಕೆ ತೆರಳಿದ ಪೊಲೀಸರಿಗೆ ಶಾಕ್. ಯಾಕಂದರೆ ನಿಸಾರ್ ಹುಡುಕಿಕೊಂಡು ಹೋದಾಗ ಆತನ ಶವ ಇದ್ದಿತ್ತು. ಮರಣೋತ್ತರ ಪರೀಕ್ಷೆ ವೇಳೆ ನಿಸಾರ್ ಸಾವನ್ನಪ್ಪಿ ಎರಡು ದಿನವಾಗಿರುವುದು ಗೊತ್ತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Good News: ಒಂದೇ ದಿನದಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಭಾರೀ ಇಳಿಕೆ

ಯೂಟ್ಯೂಬರ್ ವಿಡಿಯೋದಲ್ಲಿ ಸೆರೆಯಾಯಿತು ಸೋನಮ್ ಜತೆಗಿನ ರಾಜಾ ರಘುವಂಶಿ ಕೊನೆ ಕ್ಷಣದ ವಿಡಿಯೋ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿ, ಕಾಂಗ್ರೆಸ್ ಹಿರಿಯ ನಾಯಕಿಗೆ ಆಗಿದ್ದೇನು

ಇಂದು ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಹಾರಾಟ ದಿಢೀರ್‌ ಕ್ಯಾನ್ಸಲ್‌, ಕಾರಣ ಇಲ್ಲಿದೆ

ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ವಿಶೇಷ ಅಧಿವೇಶನ ಕರೆಯಬೇಕು: ಸುನಿಲ್ ಕುಮಾರ್

ಮುಂದಿನ ಸುದ್ದಿ
Show comments