Select Your Language

Notifications

webdunia
webdunia
webdunia
webdunia

ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಕೇಸ್: ಸಿಐಡಿ ತನಿಖೆ ಸ್ಪೀಡ್

ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಕೇಸ್: ಸಿಐಡಿ ತನಿಖೆ ಸ್ಪೀಡ್
ರಾಯಚೂರು , ಶನಿವಾರ, 27 ಏಪ್ರಿಲ್ 2019 (15:12 IST)
ಇಂಜನೀಯರಿಂಗ್ ಕಾಲೇಜು ವಿದ್ಯಾರ್ಥಿನಿ ಅನುಮಾನಸ್ಪದ ಸಾವು ಪ್ರಕರಣದ ತನಿಖೆ ತೀವ್ರಗೊಂಡಿದೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ ಸಿಐಡಿ ಅಧಿಕಾರಿಗಳು. ಕಳೆದ ಭಾನುವಾರದಿಂದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಹಲವು ಮಾಹಿತಿ ಕಲೆ ಹಾಕಿದೆ.

ರಾಯಚೂರಿಗೆ ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್ ಭೇಟಿ ನೀಡಿದ್ದಾರೆ. ಮೃತಳ‌ ಮನೆಗೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ರು.

ಪ್ರಕರಣದ ಆರೋಪಿ ಸುದರ್ಶನ ಯಾದವನ ಸಿಐಡಿ ಕಸ್ಟಡಿ ಇಂದಿಗೆ ಮುಕ್ತಾಯಗೊಂಡಿದೆ. ಸಿಐಡಿ ಅಧಿಕಾರಿಗಳು ಆರೋಪಿಯನ್ನು ವಿಚಾರಣೆ ಮಾಡುತ್ತಿದ್ದಾರೆ.

ವಿಚಾರಣೆ ಬಾಕಿ ಉಳಿದರೆ ಮತ್ತಷ್ಟು ದಿನ ಸಿಐಡಿ ಕಸ್ಟಡಿಯಲ್ಲಿರುವಂತೆ ನ್ಯಾಯಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಕಂಡುಬರುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಐಟಿಯವರು ನನ್ನ ಮನೆಯನ್ನೇ ಶೋಧ ಮಾಡಲಿ ಅಂತ ಮೋದಿ ಹೇಳಿದ್ಯಾಕೆ?