ಗಾಡ್ಫಾದರ್ ಚಿತ್ರವಿಮರ್ಶೆ: ಉಪ್ಪಿ ಅಭಿಮಾನಿಗಳಿಗೆ ಮಾತ್ರವಲ್ಲ
ಚಿತ್ರ: ಗಾಡ್ಫಾದರ್ತಾರಾಗಣ: ಉಪೇಂದ್ರ, ಸೌಂದರ್ಯಾ ಜಯಮಾಲಾ, ಕ್ಯಾಥರಿನ್ ತೆರೆಸಾ, ಸದಾನಿರ್ದೇಶನ: ಸೇತು ಶ್ರೀರಾಮ್ಸಂಗೀತ: ಎ.ಆರ್. ರೆಹಮಾನ್
ಅಜಿತ್ ತ್ರಿಪಾತ್ರದಲ್ಲಿ ನಟಿಸಿದ್ದ 'ವರಲಾರು' ಚಿತ್ರವನ್ನು ಯಾರಿಂದಲೂ ನಿರ್ವಹಿಸಲು ಸಾಧ್ಯವೇ ಇಲ್ಲ ಎಂಬ ಮಾತಿತ್ತು. ಆದರೆ ಅದನ್ನು ಸುಳ್ಳು ಮಾಡಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಸೇತು ಶ್ರೀರಾಮ್. ಮೂಲ ಚಿತ್ರಕ್ಕೆ ಸಡ್ಡು ಹೊಡೆಯುವಂತಿದೆ 'ಗಾಡ್ಫಾದರ್'. ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳಲ್ಲಿ ಕಥೆಯೇ ಇಲ್ಲ ಎಂಬ ಕೊರತೆಯನ್ನು ನೀಗಿಸಿರುವ 'ಗಾಡ್ಫಾದರ್' ರಿಮೇಕ್ ಅನ್ನೋದೊಂದು ಮಾತ್ರ ಹಿನ್ನಡೆ. ಅದನ್ನು ಬಿಟ್ಟರೆ ನಿಜಕ್ಕೂ ಅದ್ಭುತ ಚಿತ್ರ. ಇಲ್ಲಿ ಗ್ಲ್ಯಾಮರ್ ತುರುಕಿಲ್ಲ, ಮಸಾಲೆ ಹಚ್ಚಿಲ್ಲ, ಚಿತ್ರಮಂದಿರದಲ್ಲಿರುವ ಅಷ್ಟೂ ಹೊತ್ತು ಕುತೂಹಲ. ಒಂದೇ ಒಂದು ಬೋರಿಂಗ್ ಕ್ಷಣವಿಲ್ಲದಷ್ಟು ಜಾಣತನದ ನಿರೂಪನೆ.