ಬೆಂಗಳೂರು: ಎಲ್ಲಾ ಸರಿಯಾಗಿದ್ದರೆ ಜಾನ್ ಜಾನಿ ಜನಾರ್ಧನ್ ಚಿತ್ರ ನಿನ್ನೆ ಬಿಡುಗಡೆಯಾಗಬೇಕಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ 500, 1000 ನೋಟು ನಿಷೇಧ ಮಾಡಿದ್ದರಿಂದ ಎಟಿಎಂ, ಬ್ಯಾಂಕ್ ಗಳಲ್ಲಿ ದುಡ್ಡು ಸಿಗುತ್ತಿರಲಿಲ್ಲ. ಅದಕ್ಕೇ ಒಂದು ದಿನ ತಡವಾಗಿ ಬಿಡುಗಡೆಯಾಗುತ್ತಿದೆ.
ಮೂವರು ಸ್ನೇಹಿತರ ಕತೆಯುಳ್ಳ ಸಿನಿಮಾವಿದು. ಅಜೇಯ್ ರಾವ್, ಡಾರ್ಲಿಂಗ್ ಕೃಷ್ಣ, ಲೂಸ್ ಮಾದ ಯೋಗಿ ಜತೆಯಾಗಿ ನಟಿಸಿದ ಸಿನಿಮಾವಿದು. ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಈಗಾಗಲೇ ಪ್ರವಾಸ ಮಾಡಿ ಸಾಕಷ್ಟು ಕಷ್ಟಪಟ್ಟಿದೆ. ಹೋದಲೆಲ್ಲಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಖುಷಿಯಲ್ಲಿದೆ. ಹೀಗಾಗಿ ಈ ಯೂಥ್ ಓರಿಯೆಂಟೆಡ್ ಸಿನಿಮಾವನ್ನು ಜನ ನೋಡುತ್ತಾರೆಂಬ ವಿಶ್ವಾಸದಲ್ಲಿದೆ ಚಿತ್ರತಂಡ.
ನಿನ್ನೆ ಬಿಡುಗಡೆಯಾಗಬೇಕಿದ್ದ ಇನ್ನೊಂದು ಚಿತ್ರ ಸಂಚಾರಿ ವಿಜಯ್ ಅಭಿನಯದ ರಿಕ್ತ. ಅದು ಕೂಡಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಹಾರರ್ ಸಿನಿಮಾ. ಇದರಲ್ಲಿ ಒಂದು ಹಾಡನ್ನು ನಾಯಕ ವಿಜಯ್ ಹಾಡಿದ್ದಾರೆ. ಹಾರರ್ ಸಿನಿಮಾ ನೋಡುವ ಆಸಕ್ತರು ಈ ಚಿತ್ರ ನೋಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ