Select Your Language

Notifications

webdunia
webdunia
webdunia
webdunia

ನಟ ಒರಟ ಪ್ರಶಾಂತ್ ಠಾಣೆಯಿಂದ ಗ್ರೇಟ್ ಎಸ್ಕೇಪ್!

ನಟ ಒರಟ ಪ್ರಶಾಂತ್ ಠಾಣೆಯಿಂದ ಗ್ರೇಟ್ ಎಸ್ಕೇಪ್!
PR
ಪತ್ನಿಗೆ ಕಿರುಕುಳ ನೀಡಿರುವ ಆರೋಪದಲ್ಲಿ ಜೈಲು ಸೇರಿದ್ದ ಸ್ಯಾಂಡಲ್‌ವುಡ್‌ನ ಮತ್ತೊಬ್ಬ ನಾಯಕ ನಟ ಒರಟ ಪ್ರಶಾಂತ್, ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಿಂದ ಸೋಮವಾರ ಪರಾರಿಯಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶಶಿರೇಖಾ ಎಂಬವರನ್ನು 2004ರಲ್ಲಿ ವಿವಾಹವಾಗಿದ್ದ ಪ್ರಶಾಂತ್ ಪತ್ನಿಗೆ ನಿರಂತರ ಮಾನಸಿಕ ಮತ್ತು ದೈಹಿಕವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಮದುವೆ ಖರ್ಚಿನ ಹಣವನ್ನು ವಾಪಾಸು ಕೊಡುವಂತೆ ಪೀಡಿಸುತ್ತಿದ್ದರು. ಹಾಗೂ ಹೊಸ ಚಿತ್ರಗಳಲ್ಲಿ ನಾಯಕಿ ಪಾತ್ರ ನೀಡುತ್ತೇನೆಂದು ಹಲವಾರು ಯುವತಿಯರ ಮನವೊಲಿಸಿ ಮನೆಗೆ ಕರೆತರುತ್ತಿದ್ದರು ಎಂದು ಪ್ರಕರಣದ ಕುರಿತು ರಾಜ್ಯ ಮಹಿಳಾ ಆಯೋಗಕ್ಕ ಸಲ್ಲಿಸಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ನಾಯಕಿ ಪಾತ್ರಕ್ಕೆ ಕರೆತಂದಿದ್ದ ಯುವತಿಯೋರ್ವಳನ್ನು ತೋರಿಸಿ ಈಕೆಯನ್ನು ವಿವಾಹವಾಗುತ್ತೇನೆ. ತನಗೆ ವಿಚ್ಚೇದನ ನೀಡುವಂತೆ ಒತ್ತಾಯಿಸಿ ಪ್ರಶಾಂತ್ ಕಿರುಕುಳ ನೀಡುತ್ತಿದ್ದರು ಎಂದು ಪತ್ನಿ ಶಶಿರೇಖಾ ಆರೋಪಿಸಿದ್ದಾರೆ.

ಮನೆಗೆ ಕೆಲವು ಯುವಕರನ್ನೂ ಕಳುಹಿಸುವ ಮೂಲಕ ವಿವಾಹ ವಿಚ್ಚೇದನಕ್ಕೆ ಒತ್ತಾಯ ಹೇರುತ್ತಿದ್ದಾರೆ ಎಂದು ಅಸಹಾಯಕತೆ ತೋಡಿಕೊಂಡಿರುವ ಶಶಿರೇಖಾ, ಎಂಟು ವರ್ಷ ಸಂಸಾರ ಮಾಡಿರುವ ಪತಿ ಪ್ರಶಾಂತ್‌ರಿಂದ ವಿಚ್ಚೇದನ ಪಡೆಯಲು ತನಗೆ ಇಷ್ಟವಿಲ್ಲ ಎಂದಿದ್ದಾರೆ.

'ಒರಟ ಐ ಲವ್ ಯೂ' ಚಿತ್ರದಲ್ಲಿ ನಾಯಕನಾಗಿ ನಟಸಿ ಸಾಕಷ್ಟು ಖ್ಯಾತಿ ಪಡೆದಿದ್ದ ಪ್ರಶಾಂತ್, ಫ್ಲ್ಯಾಟ್‌ವೊಂದರಲ್ಲಿ ಹುಡುಗಿಯರೊಂದಿಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada