Webdunia - Bharat's app for daily news and videos

Install App

ಕಾಮಿಡಿ ಕಿಂಗ್ ಶರಣ್ ಜತೆ ಯೋಗರಾಜ್ ಭಟ್ ಸಿನಿಮಾ

Webdunia
ಭಾನುವಾರ, 4 ಆಗಸ್ಟ್ 2019 (08:47 IST)
ಬೆಂಗಳೂರು: ಎಲ್ಲವೂ ಸರಿ ಹೋಗಿದ್ದರೆ ಯೋಗರಾಜ್ ಭಟ್ ಗಾಳಿಪಟ 2 ರಲ್ಲಿ ಶರಣ್ ನಾಯಕರಾಗಬೇಕಿತ್ತು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಗಾಳಿಪಟ2 ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗುತ್ತಿದ್ದಾರೆ.


ಗಾಳಿಪಟ ಮೊದಲ ಭಾಗದಲ್ಲಿ ಗಣೇಶ್ ಅಭಿನಯ ಇಷ್ಟಪಟ್ಟಿದ್ದ ಅಭಿಮಾನಿಗಳು ಎರಡನೇ ಭಾಗದಲ್ಲೂ ಅವರನ್ನೇ ನಾಯಕರಾಗಿ ಮಾಡಿ ಎಂದು ಯೋಗರಾಜ್ ಭಟ್ ಗೆ ಒತ್ತಾಯಿಸಿದ್ದರು. ಈ ಮೊದಲು ಗಾಳಿಪಟ 2 ರಲ್ಲಿ ಶರಣ್ ನಾಯಕ ಎಂದು ಭಟ್ಟರು ಹೇಳಿಕೊಂಡಿದ್ದರು. ಆದರೆ ಅಭಿಮಾನಿಗಳ ಒತ್ತಾಯದಿಂದಾಗಿ ಶರಣ್ ಗೆ ಈ ಅವಕಾಶ ಕೈ ತಪ್ಪಿ ಹೋಯಿತು.

ಆದರೆ ತಮ್ಮ ಮೇಲೆ ಭರವಸೆಯಿಟ್ಟಿದ್ದ ಶರಣ್ ಗೆ ಬೇಸರ ಮಾಡಬಾರದು ಎಂದು ಭಟ್ರು ಈಗ ಶರಣ್ ಜತೆ ಮತ್ತೊಂದು ಸಿನಿಮಾ ಮಾಡಲಿದ್ದಾರಂತೆ. ಗಾಳಿಪಟ 2 ಆದ ಮೇಲೆ ಶರಣ್ ಜತೆ ಮತ್ತೊಂದು ಸಿನಿಮಾ ಮಾಡುವುದಾಗಿ ಯೋಗರಾಜ್ ಭಟ್ ಘೋಷಿಸಿದ್ದಾರೆ. ಅಲ್ಲಿಗೆ ಗಾಳಿಪಟ ಸಿನಿಮಾದಲ್ಲಿ ಶರಣ್ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments