Webdunia - Bharat's app for daily news and videos

Install App

ದುಬೈನಿಂದ ಚಿನ್ನ ಸಾಗಿಸಲು ರನ್ಯಾ ರಾವ್ ಮಾಡಿದ ಖತರ್ನಾಕ್ ಪ್ಲ್ಯಾನ್ ಕೇಳಿದ್ರೆ ದಂಗಾಗ್ತೀರಾ

Sampriya
ಗುರುವಾರ, 6 ಮಾರ್ಚ್ 2025 (17:40 IST)
Photo Courtesy X
ಬೆಂಗಳೂರು: ₹ 12.86 ಕೋಟಿ ಮೌಲ್ಯದ 14.2 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿ ಮಾರ್ಚ್ 3 ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಕನ್ನಡ ಚಲನಚಿತ್ರ ನಟಿ ರನ್ಯಾ ರಾವ್ ಅವರು ಕಸ್ಟಮ್ಸ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಭಾರೀ ಸ್ಕೆಚ್ ಹಾಕಿಕೊಂಡಿದ್ದರು.

ಬ್ಯಾಗ್‌ನಲ್ಲಿ ಇಟ್ಟರೆ ಚಿನ್ನಪತ್ತೆಯಾಗುತ್ತದೆಂದು 14ಕೆಜಿ ಚಿನ್ನದ ತುಂಡುಗಳನ್ನು ಪೀಸ್ ಪೀಸ್ ಮಾಡಿ ತನ್ನ ತೊಡೆಗೆ ಟೇಪ್‌ನಿಂದ ಕಟ್ಟಿಕೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಕರ್ನಾಟಕದ ಹಿರಿಯ ಡಿಜಿಪಿ ಶ್ರೇಣಿಯ ಐಪಿಎಸ್ ಅಧಿಕಾರಿಯ ಮಲ ಮಗಳಾಗಿರುವ ರನ್ಯಾ ರಾವ್ (33) ಅವರು ವಿಮಾನ ನಿಲ್ದಾಣದಲ್ಲಿ ಚಿನ್ನಾಭರಣದೊಂದಿಗೆ ಆಗಮಿಸಿರುವ ಬಗ್ಗೆ ಮಾಹಿತಿ ಪಡೆದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ.

ರಾವ್ ಧರಿಸಿದ್ದ ಜಾಕೆಟ್‌ನಲ್ಲಿ ಚಿನ್ನಾಭರಣ ಕಳ್ಳಸಾಗಣೆ ಮಾಡಲಾಗಿದೆ ಎಂಬ ಊಹಾಪೋಹವಿದ್ದರೂ, ದೈಹಿಕ ತಪಾಸಣೆಯ ವೇಳೆ ನಟಿಯ ಮೇಲೆ ಚಿನ್ನ ಪತ್ತೆಯಾಗಿದೆ ಎಂದು DRI ತಿಳಿಸಿದೆ.

ಮಾರ್ಚ್ 3 ರಂದು ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬಂದಿಳಿದ ರಾವ್ ಅವರ ಬಂಧನದ ಕುರಿತು ಡಿಆರ್‌ಐ ಅಧಿಕೃತ ಹೇಳಿಕೆಯಲ್ಲಿ, ತನಿಖೆ ವೇಳೆ ನಟಿಯಲ್ಲಿ 14.2 ಕೆಜಿ ತೂಕದ ಪೀಸ್ ಪೀಸ್‌ ಚಿನ್ನದ ತುಂಡುಗಳು ಪತ್ತೆಯಾಗಿದೆ. ‌

ರಾವ್ ತನ್ನ ತೊಡೆಯ ಮೇಲೆ ಟೇಪ್ ಮತ್ತು ಕ್ರೇಪ್ ಬ್ಯಾಂಡೇಜ್‌ಗಳಿಂದ 1 ಕೆಜಿ ತೂಕದ 14 ಚಿನ್ನದ ಬಾರ್‌ಗಳನ್ನು ಕಟ್ಟಿದ್ದರು ಮತ್ತು ನಂತರ ರವಾನೆಯನ್ನು ಮರೆಮಾಡಲು ಪ್ಯಾಂಟ್ ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆಯೂ ಚಿನ್ನವನ್ನು ಕಳ್ಳಸಾಗಣೆ ಮಾಡಲು ಇದೇ ರೀತಿಯ ಪ್ಲ್ಯಾನ್ ಅನ್ನು ಬಳಸಿದ್ದರು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜನ ನಾಯಗನ್ ಚಿತ್ರದ ದಳಪತಿ ಲುಕ್‌ಗೆ ಅಭಿಮಾನಿಗಳು ಫಿದಾ, 3.2ಕೋಟಿಗೂ ಅಧಿಕ ವೀಕ್ಷಣೆ

ಮಡೆನೂರು ಮನುಗೆ ಬಿಗ್‌ ರಿಲೀಫ್‌, ಸಿನಿಮಾ ರಂಗದಿಂದ ವಿಧಿಸಿದ್ದ ನಿಷೇಧ ತೆರವು

ಬಿಗ್ ಬಾಸ್ ಕನ್ನಡ 12 ಗೆ ಕಿಚ್ಚ ಸುದೀಪ ಇರ್ತಾರಲ್ವಾ, ನಮಗೆ ಅಷ್ಟೇ ಸಾಕು ಎಂದ ಫ್ಯಾನ್ಸ್

ಕಾದು ನೋಡಿ ಎಂದಿದ್ದ ಬಿಗ್‌ಬಾಸ್ ಪ್ರಿಯರಿಗೆ ಕಿಚ್ಚ ಸುದೀಪ್ ಕಡೆಯಿಂದ ಸರ್ಪ್ರೈಸ್‌

ಮಡೆನೂರು ಮನು ಮೇಲಿದ್ದ ನಿಷೇಧ ವಾಪಸ್: ವಾಣಿಜ್ಯ ಮಂಡಳಿ ದಯೆ ತೋರಿದ್ದೇಕೆ

ಮುಂದಿನ ಸುದ್ದಿ
Show comments