Webdunia - Bharat's app for daily news and videos

Install App

Vaishnavi Gowda engagement: ವೈಷ್ಣವಿ ಗೌಡ ನಿಶ್ಚಿತಾರ್ಥ ಗುಟ್ಟಾಗಿಡಲು ಅದೊಂದೇ ಕಾರಣನಾ

Krishnaveni K
ಮಂಗಳವಾರ, 15 ಏಪ್ರಿಲ್ 2025 (11:26 IST)
ಬೆಂಗಳೂರು: ಕನ್ನಡ ಕಿರುತೆರೆ ಖ್ಯಾತ ನಟಿ ವೈಷ್ಣವಿ ಗೌಡ ಇದೀಗ ಉದ್ಯಮಿ ಅಕಾಯ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಕೊನೆಯ ಕ್ಷಣದವರೆಗೂ ವೈಷ್ಣವಿ ತಮ್ಮ ನಿಶ್ಚಿತಾರ್ಥದ ವಿಚಾರ ಗುಟ್ಟಾಗಿಡಲು ಅದೊಂದೇ ಕಾರಣವಿರಬಹುದು ಎನ್ನಲಾಗುತ್ತಿದೆ.

ಈ ಹಿಂದೆ ಎರಡು ವರ್ಷದ ಹಿಂದೆ ವೈಷ್ಣವಿ ಗೌಡ ವಿವಾಹ ಮಾತುಕತೆ ವಿದ್ಯಾಭರಣ್ ಎಂಬವರ ಜೊತೆ ನಡೆದಿತ್ತು. ಆಗಿನ್ನೂ ನಿಶ್ಚಿತಾರ್ಥವೂ ಆಗಿರಲಿಲ್ಲ. ಎರಡೂ ಮನೆಯವರು ಬಂದು ಮಾತುಕತೆ ನಡೆಸಿ ಹೂ ಮುಡಿಸುವ ಶಾಸ್ತ್ರವಾಗಿತ್ತು. ಆದರೆ ಆ ವಿಚಾರ ಲೀಕ್ ಆಗಿ ದೊಡ್ಡ ಸುದ್ದಿಯಾಗಿತ್ತು.

ಕಾರಣಾಂತರಗಳಿಂದ ವಿದ್ಯಾಭರಣ್ ವಿವಾದದಲ್ಲಿ ಸಿಲುಕಿದರು. ಈ ವಿಚಾರದ ಬಳಿಕ ವೈಷ್ಣವಿ ಮನೆಯವರು ಮದುವೆ ಮುರಿದುಕೊಂಡಿದ್ದರು. ಈ ಘಟನೆ ವೈಷ್ಣವಿ ಹಾಗೂ ಕುಟುಂಬದವರಿಗೆ ತೀವ್ರ ನೋವು ತಂದಿತ್ತು. ಸದಾ ಪ್ರಚಾರದಿಂದ ದೂರವೇ ಉಳಿದಿರುವ ವೈಷ್ಣವಿ ಕೂಡಾ ನೊಂದುಕೊಂಡಿದ್ದರು.

ಬಹುಶಃ ಇದೇ ನೋವಿನ ಕಾರಣಕ್ಕೆ ಈ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮವನ್ನು ವೈಷ್ಣವಿ ಕುಟುಂಬಸ್ಥರು ತೀರಾ ಖಾಸಗಿಯಾಗಿಟ್ಟುಕೊಂಡಿರಬಹುದು. ಅದೇನೇ ಇರಲಿ, ಧಾರವಾಹಿಗಳ ಮೂಲಕ ಮನೆ ಮಾತಾಗಿರುವ ವೈಷ್ಣವಿ ವಿವಾಹ ಜೀವನ ಖುಷಿಯಾಗಿರಲಿ ಎಂದು ಅಭಿಮಾನಿಗಳು ಮನದುಂಬಿ ಹಾರೈಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments